Posts

ಜ್ಯಾ-ಮಿತಿ ಜೀವನ

 ಜ್ಯಾ-ಮಿತಿ ಜೀವನ ನಾವು  ಕೇಂದ್ರ  ಬಿಂದುವಿನ ಸುತ್ತ ನಿಶ್ಚಿತ ದೂರ  ತಿರುಗುವ ತ್ರಿಜ್ಯಗಳು ಕೇಂದ್ರವನ್ನೇ ಮುಟ್ಟಲು  ಸೆಣಸುತ್ತಿರುವ ಭ್ರಮರ ಬಿಂದುಗಳು ನಾವು ವ್ರತ್ತದ ಪರಿಧಿಯಲ್ಲೇ ಚಲಿಸುತ್ತ ಚಲಿಸುತ್ತ ಹೇಗೋ ಹತ್ತಿರವಾಗಲು ಯತ್ನಿಸುತ್ತಿರುವ ಮೂರ್ಖರು ನಾವು ಓ ಪ್ರಿಯರೆ ಮುಕ್ತಿಎಂಬ ಬಿಂದು ಕೇಂದ್ರ ತಾಕುವುದು ಅನಿಶ್ಚಿತ ಆದರೂ ಕೇಂದ್ರ ಮುಟ್ಟಲು ಯಾವುದೋ  ಆಕರ್ಷಣೆ ಸೆಳೆತಸೆಳೆತ ಕೊನೆಗೆ ಅಲ್ಲೇ ಗಸ್ತು ಹೊಡೆದು ವೃತ್ತಪರಿಧಿಯಲ್ಲೇ ಸೋಲೊಪ್ಪಿಕೊಳ್ಳುವ ಭೂಪರು ನಾವು, ನಿನ್ನೆಯೂ , ಇಂದೂ ನಾಳೆಯೂ ಮುಟ್ಟಲಾರದ ನಿತ್ಯ ನಿರಾಶೆಯ  ಉರುಳಿಗೆ ಕೊರಳು ಕೊಟ್ಟವರು ನಾವು ಇಲ್ಲಾಸಿಕ್ಕ ಬಿಂದುವನ್ನೇ ಕೇಂದ್ರವೆಂದು ಭ್ರಮಿಸಿ ತಬ್ಬುವವರು  ನಾವು ಡಾ ಸತ್ಯವತಿ ಮೂರ್ತಿ  ಉದಯವಾಣಿ ದೇಸಿಸ್ವರದಲ್ಲಿ 23-01-2021 ರಂದು ಪ್ರಕಟವಾಗಿದೆ

ಲಂಡನ್ ಸೇತುವೆಯ ಮೇಲಿಂದ

  ಲಂಡನ್ ಸೇತುವೆಯ ಮೇಲಿಂದ      ಇದಕಿಂತ ಸುಂದರವು ಕಾಣುವಳು ಎಂತು ಭೂತಾಯಿ ಸವಿಯದೆಲೆ ಇದನೆಲ್ಲ ಹೋಗುವನು ಕುರುಡನೋ ? ಅರಸಿಕನೋ ? ಹೃದಯ ತಟ್ಟುವ ಅತ್ಯಪೂರ್ವ   ಬೆಳಗಿನ ಸೌಂದರ್ಯ ರಾತ್ರಿ ಕಣ್ಣ ನು ಸೀಳ್ವ ಬೆಳಕಿನ ಕಿರಣಗಳ ಪ್ರಭೆಯಲ್ಲಿ   ಸೆರಗ ಹೊದ್ದು ಮೌನದಲಿ ನಿಂತಿರಲು ಲಂಡನ್ ವನಿತೆ ಗುಡಿ ಚರ್ಚು ಮಸೀದಿ ಹಡಗುಗಳು ಬಯಲಲ್ಲಿ ಮೈಚಾಚಿ ಆಗಸದಾ ಮೌನಕ್ಕೆ ಮನಸೋತು ನಿರುಕಿಸಿಹವು ಚೆಲ್ಲಿಹವು ಹೊಗೆರಹಿತ ಬೆಳಕಿನಾ ಕಿರಣವನೆಲ್ಲೆಡೆಯು   ಈ ಹಿಂದೆಂದು ಕಾಣಲಿಲ್ಲ ಈ ಬೆಡಗಿನಾ ರವಿಕಿರಣ ಬಂಡೆ ಬೆಟ್ಟಗಳಂತೆ ನಗರವನೂ ಮುದ್ದಿಡುವ ವೈಭವವ ಮೌನದಲಿ ತೆವಳುತಿಹ ಥೇಮ್ಸ್ ನದಿಯ ಪಯಣ ಬೆಳಗಿನ ಸವಿನಿದ್ದೆಯಲಿ ಮುಳುಗಿಹವು ಮನೆಗಳವು   ಸ್ಥಗಿತವಾಗಿದೆ ಇಲ್ಲಿ ಆಸ್ಫೋಟನೆಯನ್ನಡಗಿಸಿದ ದೈತ್ಯ ಹೃದಯ ಮೂಕಸಾಕ್ಷಿಯಾಗಿ ನಿಂತಿದೆ ಮೌನದಲಿ ಇಲ್ಲಿ ಬೃಹತ್   ಲಂಡನ್ ನಗರ   ಡಾ ಸತ್ಯವತಿ ಮೂರ್ತಿ      ಮೂಲ: ವಿಲಿಯಂ   ವರ್ಡ್ಸ್ವರ್ತ್ ನ ಅಪಾನ್ ದಿ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ’ 12-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ  

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು

  ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು   ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. "ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ ? " ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ   ಹಿಂದಕ್ಕೆ   ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣ ವನ್ನು ಹುಡುಕಿ ತೆಗೆದಿಟ್ಟಾಯಿತು . ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ   ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ ,   ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು , ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು.ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ ?) ಆ ವೇಳೆಗೆ ಗಂಟೆ 9 ಹೊಡೆಯಿತು. ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು   ಬಲವಂತವಾಗಿ ಏಳಿಸಿ ಸ್ನಾನಕ್ಕೆ ...

ಅಮರ ಪ್ರೇಮ

  ಅಮರ ಪ್ರೇಮ   ಮದುವೆಯೆಂಬುದೊಂದಾತ್ಮಗಳಮಿಲನವದಕೇ ಕೆದೇಹಗಳ ಮಿಲನಕ್ಕೆ ಬಂಧನ ? ತೊಡರೇಕೆ ? ಪ್ರೇಮ ಪ್ರೇಮವೆ ಸಲ್ಲ ಮಣಿದಿರಲು ಪರಿಸರಕೆ ಪ್ರೇಯಸಿಯಪ್ರೇಮರಾಗದಪಶ್ರುತಿಮಿಡಿತಕೆ.     ಚಿರವಾದ ಬೆಳಕಿನ ಮನೆಯದುವೆ ದಾರಿಗುಸುರು ಬಿರುಗಾಳಿಗಂಜದೆಲೆ ಅಳುಕದೆಲೆ ನಿಲ್ವುದದು ದಡಮುಟ್ಟೆತೊಳಲಾಡ್ವನಾವಿಕರಕಲ್ಪತರು ಎತ್ತರದಿ ನಿಂದಿಹ ಧ್ರುವತಾರೆ ನಿತ್ಯವದು     ಅಧರವದರಮೃತವಕಳೆದುಕೆನ್ನೆ ರಂಗಳಿಸಿ ನಿಂದರೂ ಕಾಲನ ಹೊಡೆತಕೆ ಸಿಗದು ಪ್ರೇಮ ವರುಷಗಳುರುಳಿದರೂ ಮಾಸದದರ ರಂಗಳಿಸಿ ಮರಣದಂಗಳದಲೂ ಮಿನುಗುವುದು ನಿಜಪ್ರೇಮ   ಇದಸತ್ಯವೆನಿಸಿದರೆ ನಿಲಿಸುವೆನು ಬರೆವುದನು ಇರಲಿಲ್ಲ ಇಂಥ ಪ್ರೇಮಿಗಳೆಂದು ನಂಬುವೆನು.   ಈ ಕವನದ ಮೂಲ Let me not to the marriage of true minds  BY  WILLIAM SHAKESPEARE   ಡಾ ಸತ್ಯವತಿ ಮೂರ್ತಿ  26-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ ಕುವೆಂಪು ಪ್ರಾಧಿಕಾರದಿಂದ ಪ್ರಕಟವಾಗುವ ಚಾತುರ್ಮಾಸಿಕ ಪತ್ರಿಕೆ೩ ರಲ್ಲೂ ಪ್ರಕಟವಾಗಿದೆ

ಅಪ್ಪನಿಗೆ

  ಅಪ್ಪನಿಗೆ     ಅಪ್ಪ ನಿನ್ನನ್ನು ನೋಡಿದಾಗಲೆಲ್ಲ ಅಂದುಕೊಳ್ಳುತ್ತೇನೆ ಎಷ್ಟು ಕಠಿಣ ನೀ ಕಲ್ಲೆದೆಯವನು!   ನಡೆಯಲು ಬರದೆ ನಾ ಅಡಿಗಡಿಗೆ ಬೀಳುತಿದ್ದಾಗ ಕಣ್ಣೀರು ಕೆನ್ನೆಮೇಲುರುಳಿ ಕೆಳಗಿಳಿಯುವಾಗ ಅಮ್ಮ ಬಂದು ನನ್ನನೆತ್ತಿ ಮುದ್ದಾಡಿ ರಮಿಸಿರಲು ಮಡಿಲಿಂದ ನನ್ನ ಬಿಡಿಸಿಬಿಟ್ಟು ಕೆಳಗಿಟ್ಟು ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು !   ಶಾಲೆಯಲ್ಲಿ ಮೊದಲದಿನ ಅಪರಿಚಿತರೆಲ್ಲ ಅಮ್ಮನೂ ಬಳಿಯಲ್ಲಿಲ್ಲ , ನನ್ನನರಿತವರಾರೂ ಇಲ್ಲ ಒಬ್ಬಂಟಿ ನಾನು ಹೆದರಿಕೆಯಲಿ ಅಳಲು ಮುದ್ದಿಸಲಿಲ್ಲ , ಸಂತೈಸಲಿಲ್ಲ ಬದಲಾಗಿ ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು!   ಆಟವಾಡುವ ನಡುವೆ ನಾ ಬಿದ್ದು ಪೆಟ್ಟ ತಿಂದು ಮಂಡಿ ತರಚಿರಲು , ಸಹಿಸ ಲಾ ರದ ನೋವಿರಲು ಗೆಳೆಯರೆನ್ನನು ಛೇಡಿಸುತ್ತ ನಗುತ್ತಿದ್ದರೆ ಬಳಿಬಂದು ನೀವುತಲಿ ಮಂಡಿಯನು ನೀಹೇಳುತ್ತಿದ್ದೆ , ಗಟ್ಟಿಯಾಗಬೇಕು ನೀನು!     ಕ್ಲಾಸಿನಲಿ ಟೀಚರಿಂದ ಏಟು ತಿಂದುದನು   ಅಮ್ಮನಿಗೆ ಹೇಳಿ ಅಳುತಿದ್ದರೆ ಅವಮಾನದಲಿ ಎಲ್ಲಿಂದಲೋ ಬಂದು ಬಳಿ ನಿಲ್ಲುತ್ತಿದ್ದೆ   ಬಂದುದನು ಎದುರಿಸಬೇಕು , ಅಳದಿರಬೇಕು ನೀ ಹೇಳುತ್ತಿದ್ದೆ , ಗಟ್ಟಿಯಾಗಬೇಕು ನೀನು!   ಎಲ್ಲದಕು ಯಾವುದಕು ಒಂದೆ ಮಂತ್ರವು ನಿನ್ನದು ನೀ ಗಟ್ಟಿಯಾಗಬೇಕು , ನೀ ಗಟ್ಟಿಯಾಗಬೇಕು. ಈಗ ನನ್ನದೊಂದೇ ಮಾತ...

ಆಶಾವಾದ

  ಆಶಾವಾದ ಜೀವನ ತೋಟದ ಉಸ್ತುವಾರಿಯ ಬಂಟರು ನಾವು ದೊರೆತಿಹುದೆಮಗೆ ನಾನಾತೆರನ ಕಾಳುಗಳ ಬಟ್ಟಲು ನಮ್ಮದೇ ತೋಟವಿದು ನಮ್ಮಂತೆ ಬೆಳೆಯಬಹುದು ಜೀವನವ ಸೊಗಯಿಸಲು ನಮ್ಮದೇ ಅಳತೆಗೋಲು ಶಿಶಿರ ಋತುಬರಬಹುದು ಅಂಜಿಕೆಯ ತರಬಹುದು ನೆನಪಿರಲಿ ಮುಂದಿಹುದು ವಸಂತ, ಶ್ರಮಿಸುವುದ ಬಿಡದಿರು ತಾಳಬೇಕು ತಾಳಿಗೆಲ್ಲಬೇಕು , ಪಡೆಯಬೇಕು ಬಯಸಿದುದು ಖಿನ್ನನಾಗದೆ ’ಸೋವಾಟ್?’ಎನುತ ನಗುತ ಮುನ್ನುಗ್ಗುತಿರು ಪ್ರತಿಕೂಲದಲಿ ನೆನೆ ವಾಲ್ಮೀಕಿಯ ’ಮರಾ’ ದಲ್ಲಿದ್ದ’ರಾಮ’ ನೆಗೆತದಲಿ ನುರಿತವಗೆ ಉಂಟು ತಡಕೆ ಪಂದ್ಯದ ಜಯ ಬಾಗಿಲೊಂದು ಮುಚ್ಚಿದೆಅಷ್ಟೆ, ತೆರೆದಿರುವುವಸೀಮ ನೀರ ಕೊರತೆಯಲಿ ನೆಲವಗೆದು ತೆಗೆವಾ ತೋಳ್ಬಲಕೆ ಜಯ ಹುಟ್ಟದಿದ್ದರೇನು ಅಮಿತ ಭಾಗ್ಯವ ಹೊತ್ತು ಆತ್ಮನಂಬಿಕೆಯಿರೆ ಒಣಮರವು ಚಿಗುರುವುದು ಸೋತರೇನು ತರಬಹುದದೇ! ಗೆಲುವಿನ ರಾಗದ ಸೊತ್ತು  ನಾಗರ ಹೆಡೆಯಲೂ ಮಣಿಯ ಕಾಣ್ವ ಶಕ್ತಿ ಮೂಡುವುದು ನಿರಾಶೆಯನು ಬದಿಗಿಡು, ಆಶಾವಾದಿಯಾಗಿರು ಸದಾ ಕಮರಿಯಲಿ ಬಿದ್ದರೂ ಮೆಲೇರು ಭರವಸೆಯ ಹಗ್ಗಹಿಡಿದು ಧೈರ್ಯದಲಿ ಮುನ್ನುಗ್ಗು ,ಹೊಸ ಹಾದಿ, ಬೆಳಕು ನಿನಾದ  ನೂರಾರು ಕವಲುಗಳು , ಒಂದೊಂದೂ ಉಜ್ವಲವಹುದು ನೆಲಕಂಟಿದ ಮರವಾಗದಿರು, ಅಸಹಾಯತೆಗೆ ಶರಣಾಗದಿರು ಓಡಲು ಕಾಲುಗಳಿಗೆ ಬಲವುಂಟು, ರೆಕ್ಕೆಗಳುಂಟು ಹಾರಲು ಹುಟ್ಟುಸ್ವತಂತ್ರ ನೀನು, ಹಿಡಿದಿಡುವ ಬಂಧನಕೆ ಬೆದರದಿರು ಜಯದೇವಿಯಪ್ಪುವಳು ಸಾಧನೆಯ ಹಾದಿಯಲಿ ನೀನಿರಲು ಡಾ ಸತ್ಯವತಿ ಮೂರ್ತಿ ಈ ಕವನ  ಡಾ ಜೀ.ವಿ ಕುಲ...

ರಜಕನಾದನು ರಾಜನು

 ರಜಕನಾದನು ರಾಜನು 1.ಬಿನ್ನಪವ ಲಾಲಿಪುದು ಗುರುವೇ ಗನ್ನಮಹಿಮಾ ಪಾದಯತಿಗಳ ಪೊನ್ನ ಚರಿತೆಯನು  ಕೇಳ್ವ  ಬಯಕೆಯು ಅಂತರಂಗದೊಳು ಇನ್ನು ಮುಂದಕೆ ಎತ್ತ ಪೋದರು ಸನ್ನುತವರ ಗುರುಯತಿಗಳೆಂಬು ದನೊಲುಮೆಯಲಿತಿಳಿಯಲುಲಿವುದೆನುತೆರಗಿದನು ಪದಕೆ 2.ಪದದೊಳೆರಗಿದ ಭಕ್ತನೇಳಿಸಿ ಮುದದೆ ಹರಸಿದ ಸಿದ್ಧರವನಿಗೆ ಪದುಮನಾಭನ ವಿಮಲಚರಿತೆಯ ಬಿಡದೆ ಪೇಳಿದರು ಪದವ ಬಿಡು ನೀ ಮೇಲೆ ಏಳೈ ಪದವ ಕೊಡುವಾ ಕತೆಯ ಪೇಳುವೆ ಪದದಿನುಡಿಯುತ ಗುರುಮಹಿಮೆಯಪಾದಯತಿವರನ 3.ಕುರುವ ಪುರದೊಳು ಗುರುವು ನೆಲೆಸಿರೆ ವರವ ಕೋರಿದ ರಜಕನೋರ್ವನು ಭರದಿ ಪಡೆದಾ ರಾಜ್ಯಪದವಿಯ ದೇಶಕೋಶಗಳ ಆರಿಗಾದರು ವರವ ನೀವರು ಗುರುವ ಕರುಣೆಯು ಹಿರಿದು ಎಲ್ಲಕು ಸಿರಿಯ ತರುವುದು ಬಯಸಿದೊಡನೆಯೆ ತಡವ ಮಾಡದೆಲೆ 4.ಗುರುವೆ ಕರುಣಿಪುದು ವಿವರಿಸುವುದು ವರಗುರುವ ವೃತ್ತಾಂತವನೆನಗೆ ಕರುಣೆತೋರ್ವುದುಪಾವನಗೊಳಿಸುವುದು ಜನುಮವನ್ನು ಕುರುವಪುರದಲಿ ರಜಕನವನಿಗೆ ಕರುಣೆಯಾದುದ ತಿಳಿಯೆ ಪೇಳ್ವುದು ವರವದೇವನು ಇತ್ತರೆನುವುದ ಬಿಡಿಸಿ ತಿಳಿಸುವುದು 5.ಅಂದು ಅಂಬಿಕೆ ವರವ ಪಡೆಯಲು ಮುಂದು ನಡೆದುದು ಬಹಳ ಮಹಿಮೆಯು ಚಂದದಿಂದಲಿ ಗುರುವು ಕುರುವಪುರದಲಿ ನೆಲೆಸಿರಲು ಬಂದು ನಿತ್ಯದಿ ಸ್ನಾನಗೈವರು ಸಂದ ಸಂಗಮ ತೀರ್ಥಗಳಲ್ಲಿ ಬಂದ ಭಕ್ತರ ಕರುಣಿಸುತತಾ ಪಾದಯತಿವರರು 6.ನಿತ್ಯದಲಗಸನೋರ್ವ ಬರುವನು ಸತ್ಯಮೂರುತಿ ಗುರುವ ಕಾಣುತ ಸತ್ಯದಿಂದಲಿ ನಮಿಸಿ ನಡೆವನುಪರಿವಿಡಿಯಲಂತೆ ಇಂತುದಿನಗಳು ಉರುಳಿಪೋಗಲು ಬಂತು ದಿನವದು ಬಾಳಲಗಸನ...

ಆಶಾವಾದ

  ಆಶಾವಾದ   ಜೀವನದ ತೋಟದಲಿ ಕೆಲಸದಾಳುಗಳು ನಾವು ದೊರಕಿಹುದೆಮಗೆಹಲತೆರನ ಕಾಳುಗಳ ಬಟ್ಟಲು ಬಿತ್ತಲು ನಮ್ಮದೇ ನೆಲ ; ಆಯ್ಕೆಯೂ ನಮ್ಮವು ಅಂದಗೈಯಲು ಬೇಕು ಜೀವನವ , ಗುರಿಯು ತಿಳಿದಿರಲು   ಋತುಗಳುಬದಲಾಗಿ ಪ್ರಕೃತ್ತಿ ತೋರಲು ವಿರೋಧವನು ಕಾಲವದು ಬಹುದು ನಮ್ಮ ನಿಶ್ಚಲ ದೃಢತೆಗೆ ತಕ್ಕಂತೆ ತಾಳಿದವ ಬಾಳಿಯಾನು ಬೇಕೆಂದ ಫಲ ಪಡೆಯುವನು ಅಪಶೃತಿಗೆಡೆಗೊಡದೆ ಮೀಟಬೇಕು ತಂತಿ ಶೃತಿಗೆ ತಕ್ಕಂತೆ     ವಿಧಿ ಪ್ರತಿಕೂಲವಾಗಿರಲು ಪೂರ್ಣಪ್ರಜ್ಞ್ಯತೆಯಲಿ ಸ್ಪಂದಿಸು ತಡಕೆ ಪಂದ್ಯದ ಗುಟ್ಟು ಗೊತ್ತು ವಿಜಯದ ಲಕ್ಶ್ಯವುಳ್ಳವಗೆ ಒಂದು ಬಾಗಿಲು ಮುಚ್ಚಲು ತೆರೆವುದು ನೂರಾರು ಗುರುತಿಸು ಸುರಿವ ನೀರಿನ ಕೊರತೆಯಿರಲು ಶರಣಾಗು ನೆಲಬಾವಿಗೆ   ಹುಟ್ಟಿನೊಡನೆ ಬಲು ಭಾಗ್ಯವನು ತರದಿದ್ದರೇನು ? ಕರಗಳ ಮಂತ್ರ ಸ್ಪರ್ಶದಿ ಕಾಷ್ಟವ ಸುವರ್ಣವಾಗಿಸು ಒಮ್ಮೆ ಸೋತರದರಲ್ಲಡಗಿಲ್ಲವೇ ಗೆಲುವಿನಾ ಜೇನು ? ಹಾವಿನಾ ಹೆಡೆಯಲು ವಜ್ರವಡಗಿಹುದು ಗುರುತಿಸು   ಸಕಾರನಂಬಿಕೆಯಲಿ ನಡೆ ತೊರೆದು ನಕಾರದಾಲೋಚನೆಗಳ ಬೀಳುತಲೆಕಲಿ ಪಾಠವ ನೇಳಲು , ಭರವಸೆಯ ಹಗ್ಗದಲಿ ಧೈರ್ಯದಲಿ ಮುನ್ನುಗ್ಗು ನೋಡು ಮುಂದಿಹ ಪ್ರಜ್ವಲಿಪ ಕಿರಣಗಳ ಅವಕಾಶವನಂತವಪಾರ  ಹೊಸಯೋಜನೆಗಳ ಸಾಕ್ಷಾತ್ಕಾರದಲಿ   ನೆಲಕ್ಕಂಟಿದ ಮರದಂತಸಹಾಯನೆನಸಂಜದಿರು ನಿನಗುಂಟು ಬಲಿಷ್ಠ ಕಾಲುಗಳು , ರೆಕ್ಕೆಗಳು ಹಾರಲು ...

ನಿಲ್ಲಿಸದಿರು ಉಸಿರಾಟವ

  17-05-2021 ನಿಲ್ಲಿಸದಿರು ಉಸಿರಾಟವ ನನ್ನಮ್ಮಾ...... ನಿಲ್ಲಿಸದಿರು ನನ್ನಮ್ಮ ಉಸಿರಾಟವ ವಾಯುವನು ನೀ ನಿಯಂತ್ರಿಸು ಅವನೊಡನೆ ಹೋಗದಿರು ಕತ್ತಲೆಯ ರಾತ್ರಿಯೊಳಗೆ ನುಸುಳಿ ಇನ್ನೇನು ಬಂದೀತು ಕೊರೆಯಾದ ಆಮ್ಲಜನಕ ......   ಮುಖವಾಡದಲ್ಲಿರಬೇಕು ದೂರನಿಲ್ಲಬೇಕು ನಾನು ಎಷ್ಟುಹತ್ತಿರವಾದರೂ ಬಲುದೂರ ಸಮುದ್ರದ ನೀರು ನಾನಿಲ್ಲೇ ನಿನ್ನ ಸನಿಹದಲ್ಲಿ ! ಅಮ್ಮ ಕೇಳುವುದೇ ನನ್ನೀ ಕೂಗು ! ಇನ್ನೇನು ಬಂದೀತು ಬಂದೀತು ಆಮ್ಲಜನಕ ......   ತಾತಮುತ್ತಾತಂದರು , ಅಜ್ಜಿಯರು ಕರೆದರೆಂಬ ನೆಪಬೇಡ ಹೊಳೆವತಾರೆಗಳು ಮನಸೆಳೆದವೆನ್ನಬೇಡ ಕಾಲವಿನ್ನೂ ಮುಗಿದಿಲ್ಲ , ತೆರಳದಿರು ನಮ್ಮನಗಲಿ ! ಇನ್ನೇನು ಬಂದೀತು ಬಂದೀತು ಆಮ್ಲಜನಕ ......   ಹಾಲು ನೀಡುವವ , ಪೇಪರನು ಹಾಕುವವ ನೆರೆಮನೆಯ ಪುಟ್ಟಹುಡುಗಿ ಅವಳಾ ಮುದ್ದುಬೆಕ್ಕು ಅತ್ತೆ , ಅಮ್ಮ , ಅಕ್ಕ , ನಿನ್ನ ಹಿತೈಷಿಗಳು ಕಾದಿಹರು ಇನ್ನೇನು ಬಂದೀತು ಬಂದೀತು ಆಮ್ಲಜನಕ ..... [31]   ..   ಯಮನೊಡನೆ ಹೋರಾಡುವ ಡಾಕ್ಟರುಗಳು ಗಳಿಗೆಗೊಮ್ಮೆ ನಿನ್ನ ನೋಡುವ ನರ್ಸುಗಳು ಎಲ್ಲರ ಶುಭಾಶಯವು ನಿನಗೆ , ಉಸಿರಾಡುತ್ತಿರಮ್ಮ ಇನ್ನೇನು ಬಂದೀತು ಬಂದೀತು ಆಮ್ಲಜನಕ .......       ಆಮ್ಲಜನಕಕ್ಕಾಗಿ ಸಾಲಿನಲಿ ನಿಂತೆ ಗಂಟೆಗಂಟೆ ...