Posts

Showing posts with the label NAGEBARAHAGALU

ದಾರಿ ದರ್ಪಣ

ಈ ಮಾತು ನಡೆದು ಈಗಾಗಲೇ ಕೆಲವು ವರ್ಷಗಳೇ ಉರುಳಿವೆ. ಲಂಡನ್ ನಗರಕ್ಕೆ ಸಮೀಪದಲ್ಲಿರುವ ,ಸ್ವಿಂಡನ್ ನಗರದಲ್ಲಿ ನಮ್ಮ ಆಪ್ತರಾದ ಶ್ರೀನಿವಾಸ ಹಾಗೂ ಗೌರಿ ವಾಸವಾಗಿದ್ದಾರೆ. ಅಲ್ಲಿಗೆ ನಮ್ಮ ಮನೆಯಿಂದ 3-4 ಗಂಟೆಗಳ ರಸ್ತೆ ಕಾರಿನಲ್ಲಿ.ಅವರ ಮನೆಯಲ್ಲಿ  ಸತ್ಯನಾರಾಯಣನ ಪೂಜೆ . ಬೆಳಗ್ಗೆ ಹೋಗಿ ಮತ್ತೆ ಸಂಜೆಗೆ ಹಿಂತಿರುಗುವುದೆಂದರೆ ಸ್ವಲ್ಪ ಆಯಾಸದ ಕೆಲಸವೇ! ಅಲ್ಲಿ  ಮೂರ್ತಿಯೇ ಪೂಜೆ ಮಾಡಿಸುವವರಿದ್ದರಿಂದ ಡ್ರೈವ್ ಮಾಡಿದುದೇ ಅಲ್ಲದೆ ,  ಪೂಜೆ ಮಾಡಿಸಲು ಒಂದೇ ಸಮನೆ ಕುಳಿತಿರಬೇಕಾಗುತ್ತದೆ . ಆಮೇಲೆ ಮತ್ತೆ ಹಿಂತಿರುಗಿ ಬರುವುದು ದೂರದ ಮಾತು. ಆದ್ದರಿಂದ ನಾನೂ ಮೂರ್ತಿ ಹಿಂದಿನ ದಿನವೇ ಹೊರಡುವುದೆಂದು ನಿರ್ಧರಿಸಿದೆವು. ಶುಕ್ರವಾರ ಸಂಜೆ ನಾನು ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಮೂರ್ತಿ ತಯಾರಾಗಿ ಕುಳಿತಿದ್ದರು. ಅವರು ಈಗಾಗಲೇ ಕೆಲಸದಿಂದ ನಿವೃತ್ತರಾಗಿದ್ದರಲ್ಲ! ಹೀಗೆ ಹೊರಗೆ ಹೋಗುವ ಅವಕಾಶಗಳು ಅವರಿಗೆ ತುಂಬ ಬೇಕಾದವುಗಳೇ ಆಗಿದ್ದವು. ನಾನೂ  ಕೆಲಸದಿಂದ ಬಂದೊಡನೆಯೇ ಕೈಕಾಲು ಮುಖ ತೊಳೆದು ಬೇರೆ ಸೀರೆಯುಟ್ಟು ಮುಖಕ್ಕೆ ಒಂದಿಷ್ಟು ಪೇಂಟ್ ಬಳಿದು ಸಿದ್ಧವಾಗಿ ನಿಂತೆ. ಗಂಟೆ ಆಗಲೇ 6-15 ತೋರಿಸುತ್ತಿತ್ತು.ನಾವಿರುವುದು ಮಾಂಚೆಸ್ಟರ್  ಗೆ ಸೇರಿದ ಒಂದು ಬಡಾವಣೆಯಲ್ಲಿ.”ಆಶ್ಟನ್ ಅಂಡರ್ ಲೈನ್" ಅದರ ಹೆಸರು. ಇಂಗ್ಲೆಂಡಿನ ಬಡವಾಣೆಗಳ ಕೆಲ ಹೆಸರುಗಳಂತೂ ಬಹಳ ವಿಚಿತ್ರವಾದವುಗಳು. ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವಂತೂ ...

ನಾನು ಮತ್ತು ನಮ್ಮವರ ಸ್ವೀಟಿ

  ನಾನು ಮತ್ತು ನಮ್ಮವರ ಸ್ವೀಟಿ ಹಲವಾರು ವರ್ಷಗಳ ಹಿಂದೆ ನನ್ನ ಕೊಡೆ ಲೇಖನ ಓದಿದ ನೆನಪಿದೆ. ನಾನು ಈ ಲೇಖನ ಬರೆಯುವಾಗ ಇದು ಅದರ ಅನುಕರಣೆಯಾಗಬಾರದು ಎಂಬ ಎಚ್ಚರಿಕೆಯೂ ಇದೆ. ಎಲ್ಲಿ ಇದು “ಅದರಂತೆ” ಎಂದು ಎನಿಸಿಬಿಡುತ್ತದೋ ಎಂಬ ಗಾಬರಿಯಿಂದಲೇ ಇಷ್ಟು ದಿನಗಳವರೆಗೆ ಈ ಲೇಖನ ಬರೆಯಲು ಪ್ರಾರಂಭಿಸದೆ ಇದ್ದೆ. ಆದರೆ ನನ್ನ ಒಂದು ಅನುಭವ ಯಾರದೋ ಅನುಭವವನ್ನು ನೆನಪಿಗೆ ತಂದುಕೊಡುತ್ತದೆ ಎಂದರೆ ಅದಕ್ಕೆ ನಾನು ಹೊಣೆಯಲ್ಲ.ಅಲ್ಲದೆ ಒಬ್ಬಿರಿಗಾದ ತೆರನ ಅನುಭವ ಮತ್ತೊಬ್ಬರಿಗೂ   ಆಗಬಾರದೆಂದೇನೂ ಇಲ್ಲವಲ್ಲ ! ಎಂದೆಲ್ಲ ತರ್ಕಿಸಿ ಈ ಲೇಖನಕ್ಕೆ ಕೈ ಹಾಕುತ್ತಿದ್ದೇನೆ. ನಾನು ಇಂಗ್ಲೆಂಡಿಗೆ ಬಂದು ನೆಲಸಿ ಮೂರು ವರ್ಷಗಳೇ ಉರುಳಿವೆ.ಆದರೆ ಮೊಟ್ಟಮೊದಲ ಬಾರಿ ಇಂಗ್ಲೆಂಡಿನಲ್ಲಿ ಕಾಲಿಟ್ಟ ದಿನದ ನೆನಪು ಇನ್ನೂ ಹಚ್ಚ ಹಸುರಾಗಿದೆ. ತಿಳಿ ಹಸಿರು ಬಣ್ಣದ “ವಾಕ್ಸಾಲ್ ಆಸ್ಟ್ರಾ” ನನ್ನನ್ನು ಎದುರುಗೊಳ್ಳಲು ಬಂದಿತ್ತು.ನನಗಾಗಿ ನನ್ನ ಹೆಸರಲ್ಲೇ ಖರೀದಿಸಿ ತಂದಿದ್ದರು ಮೂರ್ತಿ.ಹೊಚ್ಚಹೊಸ ಕಾರಲ್ಲವಾದರೂ ಹಳೆಯದೇನೂ ಅಲ್ಲ. ಅಚ್ಚುಕಟ್ಟಾದ ಸುಂದರಮೈಮಾಟದ ಆಕರ್ಷಕ ಗಾಡಿ ನನಗೂ ಮೆಚ್ಚಿಗೆಯಾಯಿತು. ’ಮೂರ್ತಿ, ಇದಕ್ಕೆ ಒಂದು ಒಳ್ಳೆ ಹೆಸರಿಡೋಣ ’ ಎಂದೆ. ಉತ್ಸಾಹದಲ್ಲಿ. ಮೂರ್ತಿಯೂ ನನ್ನ ಉತ್ಸಾಹ ಕಂಡು ’ಯಾಕಾಗಬಾರದು?....ಆದರೆ ಯಾವ ಹೆಸರಿಡೋದು?’ಎಂದರು. ಅದಷ್ಟೆ ನನಗೆ ಬೇಕಾಗಿದ್ದದ್ದು. ತಕ್ಷಣ ’ರೋಜಿ’ ಅಂತ ಇಡೋಣ್ವ ? ಅಂದೆ. ’ಛೇ ಛೇ ಏನೇ ಇದು ಇಷ್...
  ಗರ್ವ ಮುರಿಯಿತು   ಸ್ವಾತಂತ್ರ ಯೋಧ , ಮಾದರಿ ರೈತ , ಶಂಕರ , ವಾಣಿಜ್ಯ ವ್ಯವಹಾರ ಕುಶಲ ಚನ್ನಕೇಶವಯ್ಯ , ಪ್ರತಿಭಾನ್ವಿತ ರಂಗನಟ ಶಂಕರಪ್ಪನವರು , ವೇದ ಬ್ರಹ್ಮ , ವೇದ ರತ್ನಾಕರ ಚನ್ನಕೇಶವ ಅವಧಾನಿ , ಆಸ್ತಿಕ ಬಂಧುಗಳ , ವಿಧ್ಯಾರ್ಥಿಗಳ ಗುರುಗಳು ..... ಹೀಗೆ ಬರೆಯುತ್ತ ಹೋದಷ್ಟೂ ಹಿಗ್ಗುವಂತಹುದು ಅವಧಾನಿಗಳ ವ್ಯಕ್ತಿತ್ವ. ಇಂತಹವರ   ಜೀವನದಲ್ಲಿ ಅತಿ ಮಹತ್ವದ ಬದಲಾವಣೆಯನ್ನು ತಂದ ಅವರ   ಬಾಲ್ಯದ ಒಂದು ಘಟನೆ.   ಬಾಲಕ ಶಂಕರ ಮಾತು ಕಲಿತದ್ದು ಬಹಳ ನಿಧಾನ. ಆದರೆ ಕಲಿತ ಮೇಲೆ ಮಾತು ಅರಳು ಹುರಿದಂತೆ. ಕಂಠವೋ ಕಂಚಿನದು. ಮದುವೆ , ಮುಂಜಿ ಅಥವ ಯಾವುದೇ ಸಮಾರಂಭಗಳಲ್ಲಿ ವೇದದ ಘನಪಾಠ ನಡೆಯುವಾಗ ಶಂಕರ ಪ್ರಾರಂಭಿಸಿದ ಅಂದರೆ ಉಳಿದವರು ಸುಮ್ಮನಾಗಿ ಬರಿ ಕೇಳುಗರಾಗಿ ಬಿಡುತ್ತಿದ್ದರು. ಕಾರಣ   ಅವರಿಗ್ಯಾರಿಗೂ    ಬರುತ್ತಿರಲಿಲ್ಲ ಎಂದಲ್ಲ. ಇವರ ಸ್ಥಾಯಿಯಲ್ಲಿ ಹೇಳುವುದು ಕಷ್ಟವಾಗುತ್ತಿತ್ತು. ಬಹಳ ಬುದ್ಧಿವಂತನಾದ ಶಂಕರನಲ್ಲಿ ಸಹಜವಾಗಿಯೇ ಸ್ವಲ್ಪ ಅಹಂಕಾರ ಮನೆಮಾಡಿತ್ತು. ಪ್ರಾರಂಭಿಕವಾಗಿ ವಿದ್ಯಾಭ್ಯಾಸ ಮುಗಿದಮೇಲೆ ಹೆಚ್ಚಿನ ಕಲಿಕೆಗಾಗಿ ಹಿರಿಯರೊಬ್ಬರ ಬಳಿಗೆ ಹೋದ ಬಾಲಕ ಶಂಕರ. ಗೋತ್ರ ಹೇಳಿ ಅಭಿವಾದಯೇ ಮಾಡಿ ಅವರ ಮುಂದೆ ಕುಳಿತ. ಇಲ್ಲಿ ನಡೆದ ಸಂಭಾಷಣೆಯನ್ನು ಅವಧಾನಿಗಳ ಮಾತಿನಲ್ಲೇ ಹೇಳಿದರೆ ಸ್ವಾರಸ್ಯವಾಗಿರುತ್ತದೆ. "ಏನಪ್ಪ ನಿನ್ನ ಹೆಸರು ?" "ಶಂಕರ"   ಹುಡುಗ...

ಕ್ರೂರಾಣಾಸುರ

           ಕ್ರೂರಾಣಾಸುರ ಸ್ವರ್ಗದಲ್ಲಿ ಸಭೆ ಸೇರಿತ್ತು.ಇಂದ್ರ ಅಗ್ನಿ ಯಮ ವರುಣನೇ ಮೊದಲಾಗಿ ಎಲ್ಲರೂ ಸೇರಿದ್ದರು.ಸಭೆಯ ಹಿರಿಯರಾಗಿ ಬ್ರಹ್ಮ , ವಿಷ್ಣು ಹಾಗೂ ಈಶ್ವರ ವಿರಾಜಮಾನರಾಗಿದ್ದರು. ಎಲ್ಲರ ಮುಖದಲ್ಲೂ ಆತಂಕ.ಒಂದು ರೀತಿಯ ಬಿಗುಮಾನ ಕಾಣಿಸುತ್ತಿತ್ತು.ಏನೋ ಆಪತ್ತು ಬಂದಿದೆಯೆಂದು ಅವರುಗಳನ್ನು ನೋಡಿದ ಕೂಡಲೇ ತಿಳಿಯುತ್ತಿತ್ತು. ಪ್ರಸ್ತುತ ಸಮಸ್ಯೆ ಎಂದರೆ ಮನುಷ್ಯ. ಬ್ರಹ್ಮ ಈ ಮನುಷ್ಯ ಸೃಷ್ಟಿಯನ್ನು ಮಾಡಿದ್ದೇನೋ ಸರಿ ಅವನಿಗೆ ಬುದ್ಧಿಯನ್ನು ಕೊಟ್ಟು ತಪ್ಪು ಮಾಡಿದಂತೆ ತೋರುತ್ತಿತ್ತು.ಮನುಷ್ಯ ಎಲ್ಲರನ್ನೂ ಮೀರಿಸಿ ಬೆಳೆಯತೊಡಗಿದ್ದ. ಮಾನವನ ವಿಕಾಸ ಅಮೀಬಾದಿಂದ ಮನುಷ್ಯನವರೆಗಾದ ಮೇಲೆ ಮುಂದೆ ಯಾವ ರೀತಿ ಸೃಷ್ಟಿಯನ್ನು ಎಂದು ತಕ್ಷಣ ಹೊಳೆಯದೆ ಬ್ರಹ್ಮ ಮನುಷ್ಯನ ಬುದ್ಧಿಮತ್ತೆಯನ್ನು ಹೆಚ್ಚುಮಾಡುತ್ತ ಹೋದ.ಅಂದರೆ ಮನುಷ್ಯನ ಮಾನಸಿಕ , ಬೌದ್ಧಿಕ ವಿಕಾಸವಾಗುತ್ತಾ ಹೋಯಿತು ಪೀಳಿಗೆಯಿಂದ ಪೀಳಿಗೆಗೆ   ಬುದ್ಧಿ ಹೆಚ್ಚು ಹೆಚ್ಚು ಚುರುಕಾಗುತ್ತಾ ಹೋಯಿತು.ಪರಿಣಾಮ ಮನುಷ್ಯ ಇದುವರೆಗೆ ಸೃಷ್ಟಿಯ ರಹಸ್ಯವಾಗಿ ಉಳಿದಿದ್ದ ಎಷ್ಟೋ ವಿಷಯಗಳನ್ನು ಅರಿತುಕೊಂಡ.ಹಕ್ಕಿಯಂತೆ ಹಾರಲು , ಮೀನಿನಂತೆ ಈಜಲು... ಒಂದೇ ಎರಡೇ ಬ್ರಹ್ಮನ ಸೃಷ್ಟಿತತ್ವವನ್ನು ಅರಿಯಲು ಮೊದಲು ಮಾಡಿದ. ಬ್ರಹ್ಮನ ಸೃಷ್ಟಿಯನ್ನೇ ಅನುಕರಿಸುವ ಪ್ರಯತ್ನ ಮಾಡತೊಡಗಿದ.ಮನುಷ್ಯರನ್ನು ಸೃಷ್ಟಿ ಮಾಡುವ ರಹಸ್ಯವನ್ನು ಕಂಡುಕೊಂಡ...

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು   ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. "ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ ? " ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ   ಹಿಂದಕ್ಕೆ   ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣ ವನ್ನು ಹುಡುಕಿ ತೆಗೆದಿಟ್ಟಾಯಿತು . ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ   ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ ,   ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು , ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು.ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ ?) ಆ ವೇಳೆಗೆ ಗಂಟೆ 9 ಹೊಡೆಯಿತು. ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು   ಬಲವಂತವಾಗಿ ಏಳಿಸಿ ಸ್ನಾನಕ್ಕೆ ಕಳುಹಿಸಿ...

ಬದುಕು ಕಾರಿನ ಬಂಡಿ

ಬದುಕು ಕಾರಿನ ಬಂಡಿ ತಾಯ್ನಾಡನ್ನು ಬಿಟ್ಟು ತಬ್ಬಲಿಗಳಂತೆ ಪರದೇಶಕ್ಕೆ ಬಂದು , ಪರದೇಶಿಗಳಾಗಿ ನೆಲೆಸುವ ಪರಿಸ್ಥಿತಿಯಲ್ಲಿ ನಮ್ಮನ್ನು ಪ್ರೀತಿಸುವ ನಮ್ಮೊಡನೆ ಇರುವ ಸಂಗಾತಿ ಬೇಕಲ್ಲವೇ? ನಾನು ಬೆಂಗಳೂರನ್ನು ಬಿಟ್ಟು ಮ್ಯಾಂಚೆಸ್ಟರ್ ಗೆ  ಬರುವ ವೇಳೆಗೆ ನನ್ನನ್ನು ಬರಮಾಡಿಕೊಳ್ಳಲು, ಆತ್ಮೀಯತೆಯ ಸವಿಯನ್ನು ನೀಡಲು ಏರ್ಪೋರ್ಟಿಗೇ ಬಂದಿದ್ದಳು ’ವಾಕ್ಸಾಲ್ ನಕ್ಷತ್ರ, ಆಸ್ಟ್ರಾ ರಾಶಿ’ಯಲ್ಲಿ ಜನಿಸಿದ ಪಚ್ಚೆಗಿಣಿ. ನೋಡಲು ಮುದ್ದಾಗಿದ್ದ ಆಕೆ ತನ್ನ ಸೌಂದರ್ಯದಿಂದ ಎಲ್ಲರ ಮನಸೆಳೆಯುವಂತಿದ್ದಳು. ಅವಳೊಡನೆ ಪ್ರಯಾಣಿಸುವುದು ಒಂದು ಸುಖಕರವಾದ ಅನುಭವ. ತನ್ನೊಡನೆ ಪ್ರಯಾಣಿಸಲು ಕುಳಿತವರ ಯೋಗಕ್ಶೇಮವನ್ನು ಎಲ್ಲ ರೀತಿಯಲ್ಲಿಯೂ ನೋಡಿಕೊಳ್ಳುವ ಅವಳು ಸ್ನೇಹಜೀವಿ. ಯಾವ ಸಮಯದಲ್ಲೂ ತೊಂದರೆ ಕೊಡುವ ಸ್ವಭಾವದವಳಲ್ಲ.ಅಂತೂ ನನ್ನವರೆಲ್ಲರನ್ನೂ ಬಿಟ್ಟು ಬಂದಿದ್ದ ನನಗೆ ಅಚ್ಚುಮೆಚ್ಚಿನ ಸಂಗಾತಿಯಾದಳು. ಕೆಲವೇ ತಿಂಗಳುಗಳಲ್ಲಿ ಅವಳನ್ನು ಬಿಟ್ಟಿರುವುದು ನನಗೆ ಬಹಳಕಷ್ಟವಾಗುತಿತ್ತು. ಅವಳು ನಮ್ಮನ್ನು ಗಮನಿಸಿಕೊಳ್ಳುತ್ತಿದ್ದಂತೆ ನಾನೂ ಅವಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದೆ. ಕಾಲಕಾಲಕ್ಕೆ ಸ್ನಾನಮಾಡಿಸಿ ಅವಳನ್ನು ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತಿದ್ದೆ. ಆದರೆ ಎಲ್ಲದ್ದಕ್ಕೂ ಒಂದು ಕೊನೆಯಿರುತ್ತದೆ. ಎಂತಹ ಒಳ್ಳೆ ದಿನಗಳೂ ಮುಗಿದುಹೋಗುತ್ತವೆ. ಇಲ್ಲಿ ಬಂದವರು ಅಲ್ಲಿಗೆ ಹೋಗಲೇ ಬೇಕು. ಹಾಗೆಯೇ ನನ್ನ’ಪಚ್ಚೆಗಿಣಿ’ಯ ಆಯಸ್ಸೂ ಮುಗಿದು ಒಮ್ಮೆಕೊನೆ...