Posts

Showing posts from May, 2021

ಜಗದಲಿ ಸುಂದರವಾದುದು

ಜಗದಲಿ ಸುಂದರವಾದುದು ದತ್ತದೇವನ ನಾಮವಿದು ಪಾಹಿ ದತ್ತ ಪಾಹಿ ದತ್ತ  ಪಾಹಿ ದತ್ತ ಪಾಹಿ ದತ್ತ ಅನ್ಸೂಯೆಗೆ ಮಗನಾದ  ಅತ್ರಿಮುನಿಯ ಪುತ್ರನಾದ ತ್ರಿಮೂರ್ತಿ ರೂಪವ ತಾಹೊತ್ತ ದತ್ತಾತ್ರೇಯನು ತಾನಾದ / ಪಾಹಿ ದತ್ತ ಅಗಸಗೆ ಅನುಗ್ರಹ ಮಾಡಿದನು ರಾಜ್ಯ ಪದವಿಯ ನೀಡಿದನು ಅವರೆ ಬಳ್ಳಿಯ ಕಿತ್ತನು ಹೊನ್ನಿನ ಹೊಳೆಯನು ಹರಿಸಿದನು /ದತ್ತ ಗಾಣಗಪುರದಲಿ  ನೆಲೆಸಿದನು ಭಕ್ತರ ವರವಾಗಿ ಮೆರೆದನು ಶರಣರ ಪೊರೆಯುವ ಗುರುವನು ದತ್ತಾತ್ರೇಯ ದೇವನು /ಪಾಹಿ ದತ್ತ

ದತ್ತಾತ್ರೇಯ ಸುಪ್ರಭಾತ

 ಏಳು ಪಾವನ ಚರಣ ಏಳು ಪರಮಾ ಕರುಣ ಏಳು ದತ್ತಾತ್ರೇಯ ಏಳು ಗುರುವೇ ಏಳು ದೇವರದೇವ ಗಾಣಗಾಪುರದೊಡೆಯ  ಏಳು ಭಕ್ತರಕ್ಷ ಪರಮ ಗುರುವೇ ಹಕ್ಕಿ ಚಿಲಿಪಿಲಿ ಗಾನ ಮಧುರತೆಯ ಸುರತಾನ ನಿನಗೆಂದೆ ಕಾದಿಹುದು  ಶ್ರೀಪಾದನೇ ಮಂದವಾಗೆಸೆಯುತಿಹ ಮಾರುತನು ತಾನಿಂದು ನಿನಗೆ ಕಾದಿಹನಯ್ಯ ಬೆಳಗಾಯಿತೂ ರಾಜ್ಯಪದವಿಯ ಪಡೆದ ರಜಕನಿಂದಿಹನಿಲ್ಲಿ ಚರಣವಾರೋಗಿಸಲು ಏಳು ಗುರುವೇ ವೇದವನೆ ನುಡಿದನಾ ಕುಲಕೆ ಹೀನನು ತಾನು ಬಂದಿಹನು ನಿನ್ನನ್ನು ಸೇವಿಸೆ ದೇವಾ ವಿಶ್ವಮೂರ್ತಿಯು ನಿನ್ನ ಅಪರಿಮಿತ ಶಕ್ತಿಯನು ಅರಿತ ತಿವಿಕ್ರಮ ಯತಿ   ಐತಂದಿಹನು ಪರಿಪರಿಯ ಪುಷ್ಪದೊಳು ನಿನ್ನ ಪೂಜಿಸಲೆಂದು ಕಾದು ನಿಂದಿಹನೇಳು ಬೆಳಗಾಯಿತೂ ಬಂಜೆ ಎಮ್ಮೆಯು ಕರೆದ ಅದ್ಭುತವ ನೋಡಿದಾ ದಂಪತಿಗಳೈತಂದು ನಿಂದಿಹರಿಲ್ಲಿ ಅಷ್ಟರೂಪದಿ ಅಂದು ದೀವಳಿಗೆಗೈತಂದು ವಿಶ್ವರೂಪವ ನೀನು ಮೆರೆದೆ ಗುರುವೇ ಈಶ ಕಲ್ಲೇಶ ನೀ ಈಶ ಸರ್ವೇಶ ನೀನೆಂದು  ಪೊಗಳುತಲಿಹನು ನರಹರಿ ಕವಿಯು ಕುಷ್ಟರೋಗವ ಕಳೆದೆ ಜ್ಞಾನವನು ಕರುಣಿಸಿದೆ ಮೂರ್ಖನಿಗೆ ಬುದ್ಧಿಯನು ನೀಡಿದೇ ಗುರುವೆ ನಿನ್ನ ನಂಬದೆ ಬಂದ ಎನಗನುಗ್ರಹಮಾಡಿ ಎನ್ನ ಉದ್ಧರಿಸಿದಾ ಗುರುವೆ ಏಳು ಎಂದು ಬೇಡುತಲಿಹನು ನಂದಿಕವಿ ಬಂದಿಲ್ಲಿ ಬೇಳಗಾಯಿತೇಳಯ್ಯ ಪರಮ ಗುರುವೇ ಭಕ್ತವೃಂದವು ನಿನ್ನ ಸೇವೆಗೆಂದೇ ಬಂದು ಕಾದು ನಿಂದಿಹರೇಳು ಬೆಳಗಾಯಿತೂ ನಿನ್ನ ಸೇವಿಸಲೆಂದು ಹಾಲು ತುಪ್ಪವ ತಂದು ನೆರೆದಿಹರು ಶಿಷ್ಯರೂ ಏಳು ಗುರುವೇ ಬಂಜೆ ಮುದುಕಿಯುಯೆನಗೆ ಪುತ್...

ಸಿಗಲಿಲ್ಲ ಪುರಸೊತ್ತು

  ಸಿಗಲಿಲ್ಲ ಪುರಸೊತ್ತು     ಒಂದೊಮ್ಮೆ ಹುಡುಕಿ ದಣಿದಿದ್ದಳು ರಮಾಳ ಹೆಣ್ಮಗಳು ಮನೆಗೆಲಸದ ನಡುವಲ್ಲಿ, ಟಿಫಿನ್, ಕ್ಯಾರಿಯರ್ಗಳ ತಯಾರಿಯಲ್ಲಿ ಗಂಡನ ಉಪಚಾರದಲಿ , ಮಕ್ಕಳ ಹೋಂವರ್ಕ್ ಸಮಯಕ್ಕೆ ಮುಗಿಸುವಲ್ಲಿ  ಸಮೀಪದ ಅಂಗಡಿಗಳಲಿ,  ಎಲ್ಲಿ ,ಎಲ್ಲಿಯಾದರೂ ದೊರೆತೀತೆ? ಒಮ್ಮೆ ನಿಟ್ಟುಸಿರುಬಿಟ್ಟು ಕುಳಿತಿರಲು ದೊರೆತೀತೆ ? ಎಂದು ಎಲ್ಲೆಲ್ಲಿ ಅಲೆದು ಹುಡುಕಾಡಿದರೂ ಸಿಕ್ಕಿರಲಿಲ್ಲ  ಪುರಸೊತ್ತು , ಅಂತೂ ಇಂತೂ ಎಡೆಬಿಡದ ಭಗೀರಥ ಪ್ರಯತ್ನದಲಿ ಕಡೆಗೂ ಸಿಕ್ಕಿತ್ತು ಬಹಳಷ್ಟು ಹಂಬಲಿಸಿದ ಆ ಸವಲತ್ತು! ಮಹಿಳೆಯರ ಸ್ವಾತಂತ್ರ್ಯದ ಕೂಗಿನಡಿಯಲ್ಲಿ ಸಮಾನತೆಗೆ ಹೋರಾಡುವ ಸತ್ಯಾಗ್ರಹದ ನಡುವಲ್ಲಿ ಪುರುಷರೊಡನೆ ಪೈಪೋಟಿಮಾಡುವ ಆಕ್ರೋಶದಲ್ಲಿ ತಮಗಾಗಿ ” ಸ್ಪೇಸ್ ” ಹುಡುಕುವ ತರಾತುರಿಯಲ್ಲಿ ! ಅಂದೇ ಬಂದಿತು ಕುತ್ತಿಗೆ!   ಗಂಡಸಿನ ಪುರಸೊತ್ತಿಗೆ ಹುಡುಕುವ ಸರದಿ   ಬಂದಿತು ಬಡಪಾಯಿ ಗಂಡಸಿಗೆ! ಮಕ್ಕಳನು ಶಾಲೆಗಟ್ಟುವ ಗಡಿಬಿಡಿಯಲ್ಲಿ, ಆಫೀಸಿನಲ್ಲಿ ದುಡಿದು ಸಂಜೆ ಮನೆ ಸೇರುವಲ್ಲಿ. ಒಗೆದ ಬಟ್ಟೆಗಳ ಮಡಿಸಿ ಜೋಡಿಸುವಲ್ಲಿ ಸ್ವಿಂಮ್ಮಿಂಗು , ಕ್ರಿಕೆಟ್ಟು , ಇತ್ಯಾದಿ ಗಳಿಗೆ ಮಕ್ಕಳನೊಯ್ಯುವಲ್ಲಿ ಮಾಡಿದ್ದ ಅಡಿಗೆ ಬಡಿಸುವಲ್ಲಿ . ಪಾತ್ರೆ ತೊಳೆಯುವಲ್ಲಿ. ಕಡೆಗೆ ಮನೆಕಸ ಗುಡಿಸಿ ಒರೆಸುವಲ್ಲಿ! ಸಂದು ಗೊಂದುಗಳಲಿ   ಹುಡುಕಿ ದಣಿದದ...

ಈ ಪರಿಯ ಸೊಬಗು

  ಈ ಪರಿಯ ಸೊಬಗು     ಸುಂದರವಾದ ನಗುನಗುತ್ತಿರುವ ಮುಖ.ಮೈ ತುಂಬುವ ಬಿಳಿಯುಡುಗೆ. ಬೆನ್ನಿಗೆ ಅಂಟಿಕೊಂಡಂತೆ ಎರಡು ರೆಕ್ಕೆಗಳು. ಇದು ಬಾಲ್ಯದಿಂದಲೂ ನನ್ನಲ್ಲಿ ಉಂಟಾದ ಪರಿಯ ಕಲ್ಪನೆ.ಅಮ್ಮ ನನಗೆ ’ಪರಿ’ಗಳ ಪವಾಡಗಳನ್ನು ಅಗಾಗ್ಗೆ ಹೇಳುತ್ತಿದ್ದುದೇ ಇದಕ್ಕೆ ಕಾರಣ.ಪ್ರಾಪಂಚಿಕ ತಿಳುವಳಿಕೆ ಕಡಿಮೆ ಇದ್ದಾಗಿನ ವಯಸ್ಸು. ’ಪರಿ’ ಯಾವಾಗಲಾದರೂ , ಹೇಗೆ ಬೇಕಾದರೂ ಬಂದು ಪವಾಡವೆಸಗುವಳೆಂದು   ಸಂಪೂರ್ಣ ನಂಬಿದ್ದ ನಾನು ಕುಳಿತಾಗ , ನನ್ನ ಪಕ್ಕ ಸ್ಥಳ ಬಿಟ್ಟು ಮುದುರಿ ಕುಳಿತರೆ , ಮಲಗಿದಾಗ ನನ್ನ ಹಾಸಿಗೆಯ ಒಂದು ಬದಿಯನ್ನು ಪರಿಗಾಗಿ ಮೀಸಲಿಡುತ್ತಿದ್ದೆ. ಅಮ್ಮನ ಪ್ರಭಾವಕ್ಕೆ   ಬಾಲ್ಯದಿಂದಲೂ ಒಳಗಾಗಿದ್ದ ನನ್ನಲ್ಲಿ ಅಮ್ಮನ ಕಲ್ಪನೆ ನಂಬಿಕೆಗಳೇ ಬೆಳೆದು ಉಳಿದಿದ್ದವು ಎಂದರೆ ತಪ್ಪಾಗಲಾರದು.ಅಮ್ಮನಂತೆ ನನಗೂ ಪವಾಡಗಳಲ್ಲಿ ನಂಬಿಕೆ. ಆದರೆ ನನ್ನ ಅಜ್ಜಿ ಹಾಗಲ್ಲ.ಆಕೆ ಇದಕ್ಕೆ ತದ್ವಿರುದ್ಧ.’ ಜೀವನ ಎಂದರೆ ಮಂತ್ರಕ್ಕುದುರುವ ಮಾವಿನ ಕಾಯಲ್ಲ.ಬಂದ ಕಷ್ಟ ಸುಖಗಳನ್ನು ಬಂದಂತೆ ಸ್ವೀಕರಿಸಿಎದುರಿಸಬೇಕು.ಅಂದಂದಿನ ಜೀವನವನ್ನು ಎದುರಿಸಿ ಮರುದಿನದ ಜೀವನಕ್ಕೆ ಸಿದ್ಧವಾಗಬೇಕು. ಅದು ಬಿಟ್ಟು ನೆನ್ನೆಯ ಅಥವ ನಾಳೆಯ   ಚಿಂತೆಯಲ್ಲಿ ಮುಳುಗಿ ನಾವು ಬಯಸಿದ್ದನ್ನು ಕೊಡಬೇಕಾದರೆ ಯಾವುದೋ ಅವ್ಯಕ್ತ ಶಕ್ತಿಯೊಂದು ಬರಬೇಕು , ಎಂದು ಕೈಕಟ್ಟಿ ಕೂರುವುದು ಸರಿಯಲ್ಲ. ಜೀವನದ ವಾಸ್ತವತೆಯನ್ನು ಅರಿತು ಬದುಕಬೇಕು.---- ಇವು ಆಕ...
  ಗರ್ವ ಮುರಿಯಿತು   ಸ್ವಾತಂತ್ರ ಯೋಧ , ಮಾದರಿ ರೈತ , ಶಂಕರ , ವಾಣಿಜ್ಯ ವ್ಯವಹಾರ ಕುಶಲ ಚನ್ನಕೇಶವಯ್ಯ , ಪ್ರತಿಭಾನ್ವಿತ ರಂಗನಟ ಶಂಕರಪ್ಪನವರು , ವೇದ ಬ್ರಹ್ಮ , ವೇದ ರತ್ನಾಕರ ಚನ್ನಕೇಶವ ಅವಧಾನಿ , ಆಸ್ತಿಕ ಬಂಧುಗಳ , ವಿಧ್ಯಾರ್ಥಿಗಳ ಗುರುಗಳು ..... ಹೀಗೆ ಬರೆಯುತ್ತ ಹೋದಷ್ಟೂ ಹಿಗ್ಗುವಂತಹುದು ಅವಧಾನಿಗಳ ವ್ಯಕ್ತಿತ್ವ. ಇಂತಹವರ   ಜೀವನದಲ್ಲಿ ಅತಿ ಮಹತ್ವದ ಬದಲಾವಣೆಯನ್ನು ತಂದ ಅವರ   ಬಾಲ್ಯದ ಒಂದು ಘಟನೆ.   ಬಾಲಕ ಶಂಕರ ಮಾತು ಕಲಿತದ್ದು ಬಹಳ ನಿಧಾನ. ಆದರೆ ಕಲಿತ ಮೇಲೆ ಮಾತು ಅರಳು ಹುರಿದಂತೆ. ಕಂಠವೋ ಕಂಚಿನದು. ಮದುವೆ , ಮುಂಜಿ ಅಥವ ಯಾವುದೇ ಸಮಾರಂಭಗಳಲ್ಲಿ ವೇದದ ಘನಪಾಠ ನಡೆಯುವಾಗ ಶಂಕರ ಪ್ರಾರಂಭಿಸಿದ ಅಂದರೆ ಉಳಿದವರು ಸುಮ್ಮನಾಗಿ ಬರಿ ಕೇಳುಗರಾಗಿ ಬಿಡುತ್ತಿದ್ದರು. ಕಾರಣ   ಅವರಿಗ್ಯಾರಿಗೂ    ಬರುತ್ತಿರಲಿಲ್ಲ ಎಂದಲ್ಲ. ಇವರ ಸ್ಥಾಯಿಯಲ್ಲಿ ಹೇಳುವುದು ಕಷ್ಟವಾಗುತ್ತಿತ್ತು. ಬಹಳ ಬುದ್ಧಿವಂತನಾದ ಶಂಕರನಲ್ಲಿ ಸಹಜವಾಗಿಯೇ ಸ್ವಲ್ಪ ಅಹಂಕಾರ ಮನೆಮಾಡಿತ್ತು. ಪ್ರಾರಂಭಿಕವಾಗಿ ವಿದ್ಯಾಭ್ಯಾಸ ಮುಗಿದಮೇಲೆ ಹೆಚ್ಚಿನ ಕಲಿಕೆಗಾಗಿ ಹಿರಿಯರೊಬ್ಬರ ಬಳಿಗೆ ಹೋದ ಬಾಲಕ ಶಂಕರ. ಗೋತ್ರ ಹೇಳಿ ಅಭಿವಾದಯೇ ಮಾಡಿ ಅವರ ಮುಂದೆ ಕುಳಿತ. ಇಲ್ಲಿ ನಡೆದ ಸಂಭಾಷಣೆಯನ್ನು ಅವಧಾನಿಗಳ ಮಾತಿನಲ್ಲೇ ಹೇಳಿದರೆ ಸ್ವಾರಸ್ಯವಾಗಿರುತ್ತದೆ. "ಏನಪ್ಪ ನಿನ್ನ ಹೆಸರು ?" "ಶಂಕರ"   ಹುಡುಗ...
                                                                               ಯುಗಾದಿ                           ಮಗಳಿಗೆ ಜ್ವರ                         ಔಷಧಿಗಾಗಿ ನಡೆದಿದ್ದೆ ಡಾಕ್ಟರೆಡೆಗೆ                         ದಾರಿಯಲ್ಲಿ ಕುಳಿತಿದ್ದ ಹಸ್ತ ಸಾಮುದ್ರಿಕ                         ನಗರಿವಿರದೆಯೆ ಕೈಚಾಚಿದ್ದೆ ಅವನ ಮುಂದೆ                         ಭೇಷ್ ಭೇಷ್ ಬಲ್ಸೊಗಸು ಬಲ್ಸೊಗಸು                ...

ಕ್ರೂರಾಣಾಸುರ

           ಕ್ರೂರಾಣಾಸುರ ಸ್ವರ್ಗದಲ್ಲಿ ಸಭೆ ಸೇರಿತ್ತು.ಇಂದ್ರ ಅಗ್ನಿ ಯಮ ವರುಣನೇ ಮೊದಲಾಗಿ ಎಲ್ಲರೂ ಸೇರಿದ್ದರು.ಸಭೆಯ ಹಿರಿಯರಾಗಿ ಬ್ರಹ್ಮ , ವಿಷ್ಣು ಹಾಗೂ ಈಶ್ವರ ವಿರಾಜಮಾನರಾಗಿದ್ದರು. ಎಲ್ಲರ ಮುಖದಲ್ಲೂ ಆತಂಕ.ಒಂದು ರೀತಿಯ ಬಿಗುಮಾನ ಕಾಣಿಸುತ್ತಿತ್ತು.ಏನೋ ಆಪತ್ತು ಬಂದಿದೆಯೆಂದು ಅವರುಗಳನ್ನು ನೋಡಿದ ಕೂಡಲೇ ತಿಳಿಯುತ್ತಿತ್ತು. ಪ್ರಸ್ತುತ ಸಮಸ್ಯೆ ಎಂದರೆ ಮನುಷ್ಯ. ಬ್ರಹ್ಮ ಈ ಮನುಷ್ಯ ಸೃಷ್ಟಿಯನ್ನು ಮಾಡಿದ್ದೇನೋ ಸರಿ ಅವನಿಗೆ ಬುದ್ಧಿಯನ್ನು ಕೊಟ್ಟು ತಪ್ಪು ಮಾಡಿದಂತೆ ತೋರುತ್ತಿತ್ತು.ಮನುಷ್ಯ ಎಲ್ಲರನ್ನೂ ಮೀರಿಸಿ ಬೆಳೆಯತೊಡಗಿದ್ದ. ಮಾನವನ ವಿಕಾಸ ಅಮೀಬಾದಿಂದ ಮನುಷ್ಯನವರೆಗಾದ ಮೇಲೆ ಮುಂದೆ ಯಾವ ರೀತಿ ಸೃಷ್ಟಿಯನ್ನು ಎಂದು ತಕ್ಷಣ ಹೊಳೆಯದೆ ಬ್ರಹ್ಮ ಮನುಷ್ಯನ ಬುದ್ಧಿಮತ್ತೆಯನ್ನು ಹೆಚ್ಚುಮಾಡುತ್ತ ಹೋದ.ಅಂದರೆ ಮನುಷ್ಯನ ಮಾನಸಿಕ , ಬೌದ್ಧಿಕ ವಿಕಾಸವಾಗುತ್ತಾ ಹೋಯಿತು ಪೀಳಿಗೆಯಿಂದ ಪೀಳಿಗೆಗೆ   ಬುದ್ಧಿ ಹೆಚ್ಚು ಹೆಚ್ಚು ಚುರುಕಾಗುತ್ತಾ ಹೋಯಿತು.ಪರಿಣಾಮ ಮನುಷ್ಯ ಇದುವರೆಗೆ ಸೃಷ್ಟಿಯ ರಹಸ್ಯವಾಗಿ ಉಳಿದಿದ್ದ ಎಷ್ಟೋ ವಿಷಯಗಳನ್ನು ಅರಿತುಕೊಂಡ.ಹಕ್ಕಿಯಂತೆ ಹಾರಲು , ಮೀನಿನಂತೆ ಈಜಲು... ಒಂದೇ ಎರಡೇ ಬ್ರಹ್ಮನ ಸೃಷ್ಟಿತತ್ವವನ್ನು ಅರಿಯಲು ಮೊದಲು ಮಾಡಿದ. ಬ್ರಹ್ಮನ ಸೃಷ್ಟಿಯನ್ನೇ ಅನುಕರಿಸುವ ಪ್ರಯತ್ನ ಮಾಡತೊಡಗಿದ.ಮನುಷ್ಯರನ್ನು ಸೃಷ್ಟಿ ಮಾಡುವ ರಹಸ್ಯವನ್ನು ಕಂಡುಕೊಂಡ...

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು   ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. "ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ ? " ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ   ಹಿಂದಕ್ಕೆ   ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣ ವನ್ನು ಹುಡುಕಿ ತೆಗೆದಿಟ್ಟಾಯಿತು . ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ   ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ ,   ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು , ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು.ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ ?) ಆ ವೇಳೆಗೆ ಗಂಟೆ 9 ಹೊಡೆಯಿತು. ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು   ಬಲವಂತವಾಗಿ ಏಳಿಸಿ ಸ್ನಾನಕ್ಕೆ ಕಳುಹಿಸಿ...