Posts

ಜಯ ಜಯ ಹೇ

ಜಯ ಜಯ ಹೇ ವಿಘ್ನವಿನಾಯಕ             ಜಯಜಯ ಹೇ ಗಣಪತಿಯೆ(೨) ಜಯಜಯ ಹೇ ಗಣಗಳ ನಾಥ ಜಯಜಯ ಹೇ ಸುಕುಮಾರ(೨) ಲಂಬೋದರನೆ ಏಕದಂತ ಪಾರ್ವತೀ ಸುತನೇ ವಿನಾಯಕ (೨) ಮೂಷಕವಾಹನ ಮೋದಕ ಹಸ್ತ ಗೌರೀತನಯ ಗಜಾನನ(೨) ಸಿದ್ಧಿ ಬುದ್ಧಿಯ ಜಯಿಸಿದ ದೇವ ಜ್ಞಾನ ವಿಜ್ಞಾನದ ಆಕರ ದೇವ (೨) ಬುದ್ಧಿಯ ಬೆಳೆಸಿ ಸಿದ್ಧಿಯ ತಂದು ಕಾಯೌ ನಮ್ಮನು ಕರುಣಾಕರನೆ(೨) ಸಕಲ ಕಾರ್ಯಕೆ ಆದಿಯು ನೀನೆ ಸಕಲ ವಿಘ್ನವ ಹರಿಸುವ ದೇವ(೨) ಸಕಲ ಕಾರ್ಯಕೆ ಸಿದ್ಧಿಯ ನೀಡಿ ಸಕಲ ಲೋಕವ ರಕ್ಷಿಸು ದೇವ(೨) ಅಂದು ಚಂದ್ರನ ಅಟ್ಟಹಾಸಕೆ ತುಂಬುಕೋಪದಿ ಶಾಪವನಿತ್ತೆ ತಿಂಗಳ ಬೆಳಕಿನ ಇಂದುದೇವನ ಗರ್ವವ ನೀನು ಅಡಗಿಸಿದೆ ಕ್ಷಣದಲಿ ಚಂದ್ರನು ಮೊರೆ್ಯಿಡಲಂದು ಕರುಣಾಕರ ನೀ ಸಲಹಿದೆಯೋ ಶುದ್ಧ ಚೌತಿಯೊಳು ನಿನ್ನ ಭಜಿಪರನು ಕರುಣದಿ ಕಾಯೋ ಇಭಮುಖನೆ ಅಮ್ಮನಾಜ್ಞೆಯ ಪಾಲಿಸಲೆಂದು ಅಪ್ಪನ ತಡೆದೆ ನೀನಂದು ಈಶನ ಕೋಪಕೆ ಬೆಚ್ಚಬೆದರದೆ ಎದುರಿಸಿ ನಿಂತೆ ಮಹೇಶನ ಕೋಪದಿ ಈಶನು ತಲೆಯನು ತೆಗೆಯಲು ಅಮ್ಮನ ಒಲುಮೆಯು ಬದುಕಿಸಿತು ಆನೆಯ ಮುಖವ ಹೊಂದಿದೆ ನೀನು ಗಣಪತಿಯೆಂದೇ ಇಳೆಯೊಳಗುಳಿದೆ ಅಂದು ರಾವಣ ಲಿಂಗವನೊಯ್ದ ನಿನ್ನ ಭಜಿಸಲು ತಾ ಮರೆತ ಸಿದ್ಧಿಯ ನೀಡದೆ ವಿಘ್ನವ ತಂದೆ ಜಗದೊಳು ನಿನ್ನ ಶಕ್ತಿಯ ಮೆರೆದೆ ವಿಘ್ನಾಂತಕ ನೀ ವಿಘ್ನ ವಿದೂರಕ ವಿಘ್ನವಿನಾಶಕ ವಿನಾಯಕ ವಿಘ್ನವ ಹರಿಸಿ ನಿರ್ವಿಘ್ನವ ತೋರುತ ವಿಘ್ನಭಗ್ನವ ಮಾಡು ವಿಘ್ನೇಶ ನಿನ್ನ ನುತಿಸುವ ನಾಲಗೆಗೀಗ ಸರಾಗ ಕರುಣಿಸು ವಿಘ...

ಲಾವಣಿ

ಭುವನೇಶ್ವರಿಯ ಚರಣಕೆ ವಂದಿಸಿ ಹಾಡುವೆ ಇಂದಿನ ಲಾವಣಿಯ ಕೇಳಿರಿ ಸೋದರ ಸೋದರಿಯರೆ ಕನ್ನಡದೀ ಇತಿಹಾಸವನು ಸಾವಿರವೆರಡು ವರ್ಷಗಳ್ಹಿಂದೆ ಹುಟ್ಟಿದಳಿವಳು ಈ ನೆಲದೆ ಆಡುತ ಪಾಡುತ ಅಂಬೆಗಾಲಿಡುತ ನಿಂತಳು ನಡಿಗೆಯ ಕಲಿತಳು ಶಿವಕೋಟ್ಯಾಚಾರ್ಯನು ಕನ್ನಡ ಗದ್ಯದಿ ವಡ್ಡಾರಾಧನೆಯ  ರಚಿಸಿದನು ವೈಯಾರಿ ಚೆಲುವಿ ಕನ್ನಡಿತಿಯ ಹೆಜ್ಜೆಗೆ ಗೆಜ್ಜೆಯ ತೊಡಿಸಿದನು ನೋಡುತ ನೋಡುತ ಬೆಳೆದಳು ಇವಳು ಹತ್ತು ವರುಷದ ಹೆಣ್ಮಗಳು ಸೊಬಗಿನ ಸಿರಿಯ ದೇವತೆಯಿವಳು ಕನ್ನಡ ಕಾವ್ಯ ಕನ್ನಿಕೆಯು ರಾಷ್ಟ್ರಕೂಟರ ರಾಜನು ತಾನು ಅಮೋಘವರ್ಷ ನ್ರಪತುಂಗನು ಕವಿರಾಜ ಮಾರ್ಗದಿ ಮಾರ್ಗವ ತೋರುವ ಬಳೆಗಳನಿವಳಿಗೆ ತೊಡಿಸಿದನು ಪಂಪರು ಪೊನ್ನರು ರನ್ನರು ಜನ್ನರು ಸಿಂಗರಿಸಿದರು ಕಾವ್ಯದಲಿ ಪಂಪನ ಭಾರತ  ಪೊನ್ನನ ಪುರಾಣ ರನ್ನನ ಭೀಮ ವಿಜಯವು ಮತ್ತೆ ಜನ್ನನ ಯಶೋಧರಚರಿತೆಯು ಪಟ್ಟೆಯ ಸೀರೆಯು ತಾನಾಯ್ತು ತುಂಬು ಜೌವ್ವನದ ಚೆಲುವಿಯ ಚೆಲುವಿಗೆ ಕಳಶವನಿಟ್ಟಂತೆ ತಾನಾಯ್ತು ಬಂದನು ನಾರ್ಣಪ್ಪ ಕುಮಾರವ್ಯಾಸನು ಹರಿಹರ ರಾಘವಾಂಕರು ತೊಡಿಸಿದರಿವಳಿಗೆ ಅಂಚಿನ ಕುಪ್ಪುಸ ಷಟ್ಪದಿ  ರಗಳೆ ಕಾವ್ಯದಲಿ ದಾಸರು ಶರಣರು ಪದಗಳು ವಚನದಿಂದ ತಂದರು ಮುಖಕೇ ಕಂತೀಯ ಕಾಂತೆಯ ಮುಖದೊಳು ಲಾಸ್ಯವ ತೋರಲು ಮುದ್ದಣ ಮನೋರಮೆ ಹುಟ್ಟಿದರು ಕಂತೆಯ ಮುಖದೊಳು ಹಣೆಬೊಟ್ಟ ಕಾಣದೆ ಲಕ್ಷ್ಮೀಶ ಕವಿಯು ತಾನೊಂದು ಜೈಮಿನಿ ಭಾರತ ರಚಿಸುತ ಆಕೆಗೆ ಹಣೆಯಲಿ ತಿಲಕವ ರಚಿಸಿದನು ಸಂಪ್ರದಾಯದೀ ಕನ್ಯೆಗೆ ತಂದರು ಆಧುನಿಕತೆಯ ಸೌಂದರ್ಯ...

ಜ್ಯಾಮಿತಿ ಜೀವನ

  ನಾವು ಕೇಂದ್ರ  ಬಿಂದುವಿನ ಸುತ್ತ ನಿಶ್ಚಿತ ದೂರ ತಿರುಗುವ ತ್ರಿಜ್ಯಗಳು ಕೇಂದ್ರವನ್ನೇ ಮುಟ್ಟಲು ಸೆಣಸುತ್ತಿರುವ ಭ್ರಮರ ಬಿಂದುಗಳು ನಾವು ವ್ರತ್ತದ ಪರಿಧಿಯಲ್ಲೇ ಚಲಿಸುತ್ತ ಚಲಿಸುತ್ತ ಹೇಗೋ ಹತ್ತಿರವಾಗಲು ಯತ್ನಿಸುತ್ತಿರುವ ಮೂರ್ಖರು ನಾವು ಓ ಪ್ರಿಯರೆ ಮುಕ್ತಿಎಂಬ ಬಿಂದು ಕೇಂದ್ರ ತಾಕುವುದು ಅನಿಶ್ಚಿತ ಆದರೂಕೇಮ್ದ್ರ ಮುಟ್ಟಲು ಯಾವುದೋ ಆಕರ್ಷಣೆ ಸೆಳೆತಸೆಳೆತ ಕೊನೆಗೆ ಅಲ್ಲೇ ಗಸ್ತು ಹೊಡೆದು ಸೋಲೊಪ್ಪಿಕೊಳ್ಳುವ ಭೂಪರು ನಾವು ನಿನ್ನೆಯೂ , ಇಂದೂ ನಾಳೆಯೂ ಮುಟ್ಟಲಾರದ ನಿತ್ಯ ನಿರಾಶೆಯ ಉರುಳಿಗೆ ಕೊರಳು ಕೊಟ್ಟವರು ನಾವು ಇಲ್ಲಾಸಿಕ್ಕ ಬಿಂದುವನ್ನೇ ಕೇಂದ್ರವೆಂದು ಭ್ರಮಿಸಿ ತಬ್ಬುವವರು ನಾವು ಉದಯವಾಣಿ - ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಗಣಪತಿ ಹಬ್ಬ

                                                    ಗಣಪತಿ ಹಬ್ಬ ಬಂದಿತು                                                     ಬಂದಿತು ಬಂದಿತು ಗಣಪತಿ ಹಬ್ಬ                                                     ವಿನಾಯಕನ ಪೂಜಿಪ ಹಬ್ಬ                                                      ಪಾರ್ವತಿ ಪುತ್ರ ಗಣಪನ ಹಬ್ಬ    ...

ಸಕಲ...

     ಸಕಲ ಗಣಗಳಿಗೊಡೆಯ  ಏಕದಂತ      ಕರುಣಾಳುಬೆನಕ ಶ್ರೀವರದಾಯಕ      ವಿಘ್ನವಿನಾಶಕ  ಸಿದ್ಧಿದಾಯಕ      ಪಾರ್ವತೀಸುತ ನಮಸ್ತೆ ನಮಃ                                 ಗೀರ್ವಾಣಿ ಸಕಲ ಕಲಾರೂಪಿಣಿ                  ಶರ್ವಾಣಿ ವೀಣಾಪಾಣಿ                                ಬ್ರಹ್ಮನ ರಾಣಿ ನೆಲೆಸಿ ನಾಲಗೆಯಲಿ                                  ಹರಸು ಸರಸ್ವತಿಯೆ ನಿನಗೆ ನಮಸ್ತೆ ನಮಃ ಗುರುವರ್ಯರೆ ಸಕಲಹಿರಿಯರೆ ಲೋಪದೋಷಗಳನು ಮನ್ನಿಸಿ ಹಂಸಕ್ಷೀರ ನ್ಯಾಯದ ತೆರದೊಳು ಹರಸಿರಮ್ಮನು ಮುದದಲಿ                              

ಉದಿಸಿ ಬಾ ತಾಯೆ

ಉದಿಸಿ ಬಾ ತಾಯೆ ಪುರಾಣಗಳಲ್ಲಿ ಓದಿದ್ದೇನೆ ಕತೆಗಳಲ್ಲಿ ಕೇಳಿದ್ದೇನೆ ರಕ್ಕಸರ ಹಾವಳಿಯನ್ನ ದುಷ್ಟ ಶಕ್ತಿಯ ದಬ್ಬಾಳಿಕೆಯನ್ನ ಮಹಿಷಾಸುರ, ಶುಂಭ ನಿಶುಂಭ ಚಂಡ ಮುಂಡ ರಕ್ತಬೀಜಾಸುರ ಶಿವನಿತ್ತ ವರದಲ್ಲಿ ಕೊಬ್ಬಿದ ರಕ್ಕಸರು ಮತಿಗೆಟ್ಟು ಧರೆಗೆ ಕಳವಳವ ತುಂಬಿದರು ಚಂಡಿ ಚಾಮುಂಡಿಯಾಗಿ ದುರ್ಗೆ ಮಹಾದೇವಿಯಾಗಿ ದುಷ್ಟಶಕ್ತಿಗಳ ನಾಶಮಾಡಿದ ದೇವಿ ಎಲ್ಲಿದ್ದೀಯೆ ತಾಯೆ? ಅವತರಿಸಿ ಬರಬಾರದೆ? ಕೋವಿಡ್-೧೯ ರಕ್ಕಸನ ಮುಗಿಸಬಾರದೆ? ವಿಜ್ಙಾನಿಗಳ ಬುದ್ಧಿಮತ್ತೆಯಲಿ  ನೆಲಸಿ ಬಾ ಹೆತ್ತವರ ದುಖಃದ, ಕಂದಮ್ಮಗಳ ಕಣ್ಣಿರ ವಿಧವೆಯರ ನೋವ ಒಡಹುಟ್ಟಿದವರ ಅಳಲ ರೋಗಕ್ಕೆ ಬಲಿಯಾದವರ ಶಾಪವಾಗಿ ಬಾ ಕೀಟಾಣು ರಕ್ಕಸನ ಎದೆ ಬಗೆದು ಕೊರಳ ಸಿಗಿದು ಹೇಳ ಹೆಸರಿಲ್ಲದಂತೆ ಛಿದ್ರ ಛಿದ್ರ ಮಾಡಿ ಮುಗಿಸು ಬಾ ಅವನ ವರವೇ ಅವನಿಗೆ ಮುಳುವಾಗುವಂತೆ ವ್ಯಾಕ್ಸಿನ್ನಿನ ರೂಪದಲಿ ಅವತರಿಸು ಬಾ ಉದಿಸಿ ಬಾ ತಾಯೆ, ನೊಂದ ಮನುಜರ  ವರವಾಗಿ ಜಗವನುದ್ಧರಿಸೆ ತ್ವರಿತದಿಂದುದಿಸಿ ಬಾ ಡಾ ಸತ್ಯವತಿ ಮೂರ್ತಿ ಉದವಾಣಿಯಲ್ಲಿ ಪ್ರಕಟವಾಗಿದೆ.

ಕವಾಲಿ

  ಇದ್ದರೆ ಶಾಲೆಗೆ ನಿತ್ಯವೂ ರಜ   ಮಕ್ಕಳಿಗೆಲ್ಲ ಮಜವೋ ಮಜ   ಪಾಠದ ಗೋಜು ಇಲ್ಲವೇ ಇಲ್ಲ   ಆಟವೇ ಆಟ ಇಡಿ ದಿನವೆಲ್ಲ  ಇದ್ದರೆ ಶಾಲೆಗೆ ನಿತ್ಯವೂ ರಜ ಆದೀತು ಮಕ್ಕಳ ಪಾಲಿಗೆ ಸಜ ಬರಬೇಕು ಒಮ್ಮೊಮ್ಮೆನಡುವಲಿ ರಜ ಹಾಲಿಗೆ ಸಕ್ಕರೆ ಬೆರತಂತೆ ನಿಜ ಬೆಳಗಾಯ್ತು ಎಂದರೆ ಶಾಲೆಗೆ ಓಟ  ಸಂಜೆಗೆ ಬರುವುದು ಟ್ಯೂಷನ್ ಕಾಟ   ರಾತ್ರಿಬೆಳಗೂ ಓದುವ ಭೂತ   ಟಿವಿ ಆಟ ಎಲ್ಲವೂ ಖೋತ ಬೆಳಗಾದ್ರೆ ಶಾಲೆಗೆ ಹೋಗುವ ಸಡಗರ ರಾತ್ರಿಗೆ ಟ್ಯೂಷನ್ಇದ್ದರೆ ಆದರ  ರಾತ್ರಿಬೆಳಗೂ ಪಾಠವನೋದಲು  ಸಂಜೆಯ ಸಮಯದಿ ಆಟವೇ ಆಟ                                         ಬಿಳಿಷೂಸಿಗಾಗ್ಬೇಕು ಆಗಾಗ್ಗೆ ಪಾಲಿಷು                                         ಕರಿಷೂಸಿಗಾಗ್ಬೇಕು ನಿತ್ಯವೂ ಮಾಲೀಷು           ...