ಏಳು ಪಾವನ ಚರಣ /ಏಳು ಪರಮಾ ಕರುಣ

 ಏಳು ಪಾವನ ಚರಣ /ಏಳು ಪರಮಾ ಕರುಣ

ಏಳು ದತ್ತಾತ್ರೇಯ /ಏಳು ಗುರುವೇ


ಏಳು ದೇವರದೇವ /ಗಾಣಗಾಪುರದೊಡೆಯ 

ಏಳು ಭಕ್ತರರಕ್ಷ / ಪರಮ ಗುರುವೇ


ಹಕ್ಕಿ ಚಿಲಿಪಿಲಿ ಗಾನ /ಮಧುರತೆಯ ಸುರತಾನ

ನಿನಗೆ ಕಾದಿಹು/ದು  ಶ್ರೀಪಾದನೆ


ಮಂದವಾಗೆಸೆಯುತಿಹ/ ಮಾರುತನು ತಾನಿಂದು

ನಿನಗೆ ಕಾದಿಹನಯ್ಯ ಬೆಳಗಾಯಿತೂ


ರಾಜ್ಯಪದವಿಯ ಪಡೆದ/ ರಜಕನಿಂದಿಹನಿಲ್ಲಿ

ಚರಣವಾರೋಗಿಸಲು/ ಏಳು ಗುರುವೇ


ವೇದವನೆ ನುಡಿದನಾ / ಕುಲಕೆ ಹೀನನು ತಾನು

ಬಂದಿಹನು ನಿನ್ನನ್ನು/ ಸೇವಿಸೆ ದೇವ


ವಿಶ್ವಮೂರ್ತಿಯು ನಿ/ನ್ನಪರಿಮಿತ ಶಕ್ತಿಯನು

ಅರಿತ ತಿವಿಕ್ರ/ಮ ಯತಿ  / ಐತಂದಿಹನೂ


ಪರಿಪರಿಯ ಪುಷ್ಪದೊಳು /ನಿನ್ನ ಪೂಜಿಸಲು

ಕಾದು ನಿಂದಿಹನೇಳು/ ಬೆಳಗಾಯಿತೂ


ಬಂಜೆ ಎಮ್ಮೆಯು ಕರೆದ /ಅದ್ಭುತವ ನೋಡಿದಾ

ದಂಪತಿಗಳೈತಂದು /ನಿಂದಿಹರಿಲ್ಲಿ


ಅಷ್ಟರೂಪದಿ ಅಂದು /ದೀವಳಿಗೆಗೈತಂದು

ವಿಶ್ವರೂಪವ ನೀನು /ಮೆರೆದೆ ಗುರುವೇ


ಈಶ ಕಲ್ಲೇಶ ನೀ /ಈಶ ಸರ್ವೇಶನೀ

 ಪೊಗಳುತಲಿಹನು/ ನರಹರಿ ಕವಿಯು


ಕುಷ್ಟರೋಗವ ಕಳೆದೆ /ಜ್ಞಾನವನು ಕರುಣಿಸಿದೆ

ಮೂರ್ಖನಿಗೆ ಬುದ್ಧಿಯನು/ ನೀಡಿದೆ ಗುರುವೆ


ನಿನ್ನ ನಂಬದೆ ಬಂದ/ ಎನಗನುಗ್ರಹಮಾಡಿ

ಎನ್ನ ಉದ್ಧರಿಸಿದಾ/ ಗುರುವೆ ಏಳು


ಎಂದು ಬೇಡುತಲಿಹನು/ ನಂದಿಕವಿ ಬಂದಿಲ್ಲಿ

ಬೆಳಗಾಯಿತೇಳಯ್ಯ/ ಪರಮ ಗುರುವೇ


ಭಕ್ತವೃಂದವು ನಿನ್ನ /ಸೇವೆಗೆ ಬಂದು

 ನಿಂದಿಹರೇಳು/ ಬೆಳಗಾಯಿತೂ


ನಿನ್ನ ಸೇವಿಸಲೆಂದು /ಹಾಲು ತುಪ್ಪವ ತಂದು

ನೆರೆದಿಹರು ಶಿಷ್ಯರೇ/ಳಯ್ಯ ಗುರುವೇ 

 

ಬಂಜೆ ಮುದುಕಿಯುಯೆನಗೆ/ ಪುತ್ರನನು ಕರುಣಿಸಿದೆ

ಎನ್ನ ಕರ್ಮವ ಕಳೆದು/ ಉದ್ಧರಿಸಿದೇ


ಎಂದು ಪಾಡುತ ಮಹಿಮೆ/ ನಿಂದಿಹಳು ಗಂಗಾ

ಏಳು ದತ್ತಯ್ಯನೇ /ಬೆಳಗಾಯಿತೂ


ಯತಿ ನರಸಿಂಹನಾಗಿ /ನಿನ್ನ ಹಡೆದಾ ಅಂಬ

ಬಂದಿಹಳು ನಿನ್ನನ್ನು /ಮುದ್ದಿಸಲು ತಾ


ಮೂಕನಾದನ ಮಗನ /ಮಾತುಗಳ ಲಾಲಿಸಲು

ಹಂಬಲಿಸಿ ಬಂದಿಹಳು /ಏಳು ಯತಿವರ


ಅವರೆ ಬಳ್ಳಿಯ ಕಿತ್ತು /ಅಕ್ಷಯದ ಹೊನ್ನಿತ್ತು

ಐಸಿರಿಯ ತುಂಬಿದಾ / ವಿಪ್ರನಂ ನೋಡೇಳು


ಹೊಲದ ಬೆಳೆಯನು ಕಿತ್ತು /ಎರಡುಪಟ್ಟನು ಬೆಳೆಸಿ

ಭಕ್ತಿಯೊಳಗಿಹ ಶಕ್ತಿ/ ಜಗಕೆ ತೋರಿದೆ ನೀನು


ಅಂದು ಭಾಸ್ಕರ ತಂದ /ನಾಲ್ಕು ಹಿಡಿಯಕ್ಕಿಯಲಿ

ನಾಲ್ಕು ಸಾಸಿರ ಉಂಡು/ ತಣಿದು ತೇಗಲು


ಮೂಕನಾದನು ತಾನು /ಭಾಸ್ಕರನು ಬೆರಗಿನಲಿ

ಎಚ್ಚರಿಸಲೂ ಏಳು /ಬೆಳಗಾಯಿತೂ


ಮಂಗಳವು ಗುರು ದತ್ತಾತ್ರೇಯಗೆ

ಮಂಗಳವು ಅನಸೂಯೆಗೊಲಿದ ತ್ರಿಮೂರ್ತಿಗೆ

ಮಂಗಳವು ನರಸಿಂಹ ಸರಸ್ವತಿಗೆ

ಮಂಗಳವು ಗಾಣಗಾಪುರದರಸಗೆ


ಡಾ ಸತ್ಯವತಿ ಮೂರ್ತಿ  .

ತಿರುಪತಿಯಿಂದ ಪ್ರಕಟವಾಗುವ ಸಪ್ತಗಿರಿ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ


Comments

Popular posts from this blog

ದೇವಾ ಕರುಣೆಯ ನು ತೋರ ಲಾರೆಯ

ಕವಾಲಿ

ಹೊಂದಾಣಿಕೆ