Posts

Showing posts from January, 2022

ದುಷ್ಟ ಅಂಚೆಯವನು

ನೀನೇಕೆ ಹತಾಶಳಾಗಿ ಕುಳಿತಿರುವೆ ನನ್ನಮ್ಮ  ಮಳೆಯ ಇರಿಚಲು ಒಳಗೆ ಹಾರುತಿವೆ ಬಟ್ಟೆ ನಿನ್ನವು ತೊಯ್ದುಹೋಗುತಿವೆ ಅರಿವಿರದೆ ಮೈಮರೆತು ನೆಲದಲ್ಲಿ ಕುಳಿತಿರುವೆ?  ಚರ್ಚಿನ ಗಡಿಯಾರ ನಾಲ್ಕು ಬಾರಿಸಿದ್ದೂ ಕೇಳಿಸಿಲ್ಲೇನು?  ಇನ್ನೇನು  ತಮ್ಮ ಬರುವ ಹೊತ್ತಾಯ್ತು ಶಾಲೆಯಿಂದ. ಅದರರಿವೂ ಇರದೆ ಅಪರಿಚಿತಳಂತಿರುವೆಯಲ್ಲ!  ಓ.... ! ಅಪ್ಪನಿಂದ ಪತ್ರಬರಲಿಲ್ಲವೇನು ಇನ್ನೂ? ನೋಡಿದ್ದೆ ನಾನು ಹೋಗುತ್ತಿದ್ದ ಅಂಚೆಯವನನ್ನ! ಎಲ್ಲರಿಗೂ ಪತ್ರ ತಂದುಕೊಟ್ಟವನನ್ನ! ಅಪ್ಪನ ಪತ್ರವನು ಮಾತ್ರ ಕೊಡದೆ ಹೋದನು,  ತನಗೇ ಓದಲು ಬೇಕೇನೋ? ಬಹಳ ದುಷ್ಟನವನು. ನೀ ಬೇಸರಿಸದಿರು ಅದಕಾಗಿ ನನ್ನಮ್ಮ. ನಾಳೆ ಸಂತೆಯು ನೆರೆಯೂರಿನಲಿ ಆಳುಗಳ ಕಳಿಸಿ  ತರಿಸು ಪೇಪರು ಪೆನ್ನುಗಳ ನಾನೇ ಕೈಯಾರ ಬರೆದುಕೊಡುವೆ ಅಪ್ಪನಾ ಪತ್ರಗಳ! ಎದೆ ತಟ್ಟಿ ಹೇಳುವೆನು, ಒಂದೂ ತಪ್ಪನು ನೀ ಕಾಣಲಾರೆ ನನಗೆಲ್ಲ ಗೊತ್ತು ’ಅ’ ಇಂದ ”ಅಃ" ತನಕ  ಏಕಮ್ಮ ನಗುತಿಹೆ ನನ್ನ ಮಾತನು ಕೇಳಿ? ನಿನಗೆ ನಂಬಿಕೆ ಯಿಲ್ಲವೇನು? ಅಪ್ಪನಂತೆ ನಾ  ಗುಂಡಾಗಿ ಬರೆಯೆನೇನು? ನಂಬು ನನ್ನನ್ನು , ಪೇಪರಿಗೆ ರೂಲುದೊಣ್ಣೆಯನಿಟ್ಟು  ಅಪ್ಪನಷ್ಟೇ ಮುತುವರ್ಜಿಯಲಿ , ಬರೆವೆನು ದಪ್ಪ ದಪ್ಪಕ್ಷರಗಳಲಿ ಚಿಂತಿಸಬೇಡ ನೀನು ನಾ ಬರೆದ ಪತ್ರವನು ಕೊಡೆನು ಅಂಚೆಯವನಿಗೆ ನಾನೇ ಕೊಡುವೆ ತಂದು ನಿನ್ನ ಕೈಗೆ! ಓದಿ ಹೇಳುವೆ ಒಂದೊಂದೇ ಅಕ್ಷರವ! ನನಗೆ ತಿಳಿದಿದೆ ಅಮ್ಮ ಅಂಚೆಯವನ ಮನಸ್ಸು, !...

ದಾರಿ ದರ್ಪಣ

ಈ ಮಾತು ನಡೆದು ಈಗಾಗಲೇ ಕೆಲವು ವರ್ಷಗಳೇ ಉರುಳಿವೆ. ಲಂಡನ್ ನಗರಕ್ಕೆ ಸಮೀಪದಲ್ಲಿರುವ ,ಸ್ವಿಂಡನ್ ನಗರದಲ್ಲಿ ನಮ್ಮ ಆಪ್ತರಾದ ಶ್ರೀನಿವಾಸ ಹಾಗೂ ಗೌರಿ ವಾಸವಾಗಿದ್ದಾರೆ. ಅಲ್ಲಿಗೆ ನಮ್ಮ ಮನೆಯಿಂದ 3-4 ಗಂಟೆಗಳ ರಸ್ತೆ ಕಾರಿನಲ್ಲಿ.ಅವರ ಮನೆಯಲ್ಲಿ  ಸತ್ಯನಾರಾಯಣನ ಪೂಜೆ . ಬೆಳಗ್ಗೆ ಹೋಗಿ ಮತ್ತೆ ಸಂಜೆಗೆ ಹಿಂತಿರುಗುವುದೆಂದರೆ ಸ್ವಲ್ಪ ಆಯಾಸದ ಕೆಲಸವೇ! ಅಲ್ಲಿ  ಮೂರ್ತಿಯೇ ಪೂಜೆ ಮಾಡಿಸುವವರಿದ್ದರಿಂದ ಡ್ರೈವ್ ಮಾಡಿದುದೇ ಅಲ್ಲದೆ ,  ಪೂಜೆ ಮಾಡಿಸಲು ಒಂದೇ ಸಮನೆ ಕುಳಿತಿರಬೇಕಾಗುತ್ತದೆ . ಆಮೇಲೆ ಮತ್ತೆ ಹಿಂತಿರುಗಿ ಬರುವುದು ದೂರದ ಮಾತು. ಆದ್ದರಿಂದ ನಾನೂ ಮೂರ್ತಿ ಹಿಂದಿನ ದಿನವೇ ಹೊರಡುವುದೆಂದು ನಿರ್ಧರಿಸಿದೆವು. ಶುಕ್ರವಾರ ಸಂಜೆ ನಾನು ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಮೂರ್ತಿ ತಯಾರಾಗಿ ಕುಳಿತಿದ್ದರು. ಅವರು ಈಗಾಗಲೇ ಕೆಲಸದಿಂದ ನಿವೃತ್ತರಾಗಿದ್ದರಲ್ಲ! ಹೀಗೆ ಹೊರಗೆ ಹೋಗುವ ಅವಕಾಶಗಳು ಅವರಿಗೆ ತುಂಬ ಬೇಕಾದವುಗಳೇ ಆಗಿದ್ದವು. ನಾನೂ  ಕೆಲಸದಿಂದ ಬಂದೊಡನೆಯೇ ಕೈಕಾಲು ಮುಖ ತೊಳೆದು ಬೇರೆ ಸೀರೆಯುಟ್ಟು ಮುಖಕ್ಕೆ ಒಂದಿಷ್ಟು ಪೇಂಟ್ ಬಳಿದು ಸಿದ್ಧವಾಗಿ ನಿಂತೆ. ಗಂಟೆ ಆಗಲೇ 6-15 ತೋರಿಸುತ್ತಿತ್ತು.ನಾವಿರುವುದು ಮಾಂಚೆಸ್ಟರ್  ಗೆ ಸೇರಿದ ಒಂದು ಬಡಾವಣೆಯಲ್ಲಿ.”ಆಶ್ಟನ್ ಅಂಡರ್ ಲೈನ್" ಅದರ ಹೆಸರು. ಇಂಗ್ಲೆಂಡಿನ ಬಡವಾಣೆಗಳ ಕೆಲ ಹೆಸರುಗಳಂತೂ ಬಹಳ ವಿಚಿತ್ರವಾದವುಗಳು. ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವಂತೂ ...