Posts

Showing posts from April, 2021

ದತ್ತಾತ್ರೇಯ ಸುಪ್ರಭಾತ

 ಏಳು ಪಾವನ ಚರಣ ಏಳು ಪರಮಾ ಕರುಣ ಏಳು ದತ್ತಾತ್ರೇಯ ಏಳು ಗುರವೇ ಏಳು ದೇವರದೇವ ಗಾಣಗಾಪುರದರಸ ಏಳು ಭಕ್ತರ ರಕ್ಷ ಪರಮ ಗುರವೇ ಹಕ್ಕಿಚಿಲಿಪಿಲಿಗಾನ ಮಧುರತೆಯ ಸ್ವರತಾನ ನಿನಗೆಂದೆಕಾದಿಹುದು ಶ್ರೀಪಾದನೇ ಮಂದವಾಗೆಸೆಯುತಿಹ ಮಾರುತನು ತಾನಿಂದು ನಿನಗೆ ಕಾದಿಹನಯ್ಯ ಬೆಳಗಾಯಿತೂ ರಾಜ್ಯ ಪದವಿಯ ಪಡೆದ ರಜಕನಿಂದಿಹನಿಲ್ಲಿ ಚರಣವಾರೋಗಿಸಲು ಏಳು ಗುರುವೇ ವೇದವನೆ ನುಡಿದನಾ ಕುಲಹೀನನು ತಾನು  ಬಂದಿಹನು ನಿನ್ನನ್ನು ಸೇವಿಸಲು ದೇವ ವಿಶ್ವಮೂರ್ತಿಯೆ ನಿನ್ನ ಅಪರಿಮಿತ ಶಕ್ತಿಯನು ಅರಿತ ತಿವಿಕ್ರಮಯತಿಯು  ಐತಂದಿಹನು ಪರಿಪರಿಯ ಪುಷ್ಪದೊಳು ನಿನ್ನ ಪೂಜಿಸಲೆಂದು ಕಾದು ನಿಂದಿಹನೇಳು ಬೆಳಗಾಯಿತೂ ಬಂಜೆ ಮುದುಕಿಯು ಎನಗೆ ಪುತ್ರನನು ಕರುಣಿಸಿದೆ ಎನ್ನ ಕರ್ಮವ ತೊಳೆದು ಉದ್ಧರಿಸಿದೇ ಎಂದು ಪಾಡುತ ಮಹಿಮೆ ನಿಂದಿಹಳು ಗಂಗಾ ಏಳು ದತ್ತಯ್ಯನೇ ಬೆಳಗಾಯಿತೂ ಯತಿನರಸಿಂಹನಾಗಿ ನಿನ್ನ ಹಡೆದಾ ಅಂಬ ಬಂದಿಹಳು ನಿನ್ನನ್ನು ಮುದ್ದಿಸಲು ತಾ ಮೂಕನಾದಾ ಮಗನ ಮಾತುಗಳ ಲಾಲಿಸಲು ಹಂಬಲಿಸಿ ಬಂದಿಹಳು ಏಳು ಯತಿವರನೇ ಅವರೆಬಳ್ಳಿಯ ಕಿತ್ತು ಅಕ್ಷಯದ ಹೊನ್ನಿತ್ತು ಐಸಿರಿಯ ತುಂಬಿದಾ ವಿಪ್ರನಂ ನೋಡೇಳು ಹೊಲದ ಬೆಳೆಯನು ಕಿತ್ತು  ಎರಡುಪಟ್ಟನು ಬೆಳೆಸಿ ಭಕ್ತಿಯೊಳಗಿಹ ಶಕ್ತಿಯ ಜಗಕೆ ತೋರಿದೆ ಅಂದು ಮಾಧವ ತಂದ ನಾಲ್ಕು ಹಿಡಿಯಕ್ಕಿಯಲಿ ನಾಲ್ಕು ಸಾಸಿರ ಉಂಡು ತಣಿದು ತೇಗಲು  ಮೂಕನಾದಾನು ತಾನು ಮಾಧವನು ಬೆರಗಿನಲಿ ಎಚ್ಚರಿಸಲೂ  ಏಳು ಬೆಳಗಾಯಿತೂ ಬಂಜೆ ಎಮ್ಮೆಯು ...

ಸತ್ಯನಾರಾಯಣ ಕಥೆ

 ಓಂ ಜಯ ಸತ್ಯನಾರಾಯಣ  ಸ್ವಾಮಿ ಸತ್ಯನಾರಾಯಣ ಮುನಿಜನ ವಂದಿತ ಚರಣ(2) ಆಶ್ರಿತ ಜನ ಶರಣ               ಭಕ್ತಿಗೆ ಮೆಚ್ಚಿ ಬ್ರಾಹ್ಮಣಗೆ               ಐಶ್ವರ್ಯವನಿತ್ತೆ ಸ್ವಾಮಿ               ಕಟ್ಟಿಗೆ ಹೊರುವಗೆ ಕರುಣಿಸಿ(2)               ಬಡತನವ ಕಳೆದೆ ಭಜಿಸಿರೆ ನಿನ್ನ ಉಲ್ಕಮುಖ ವಣಿಜನು ತಾನೋಡಿ(ಸ್ವಾಮಿ) ಅರ್ಚಿಸಿ ನಿನ್ನನು ಪಡೆದನು(2) ಮುದ್ದಿನ ಕುವರಿಯನು                      ವರದಲಿ ಹಿಗ್ಗಿದ ವಣಿಜನು                    ವ್ರತವನು ಮರೆತನು(ಸ್ವಾಮಿ)                    ಪತ್ನಿಯು ನೆನಪನು ನೀಡಲು(2)                    ಮದುವೆಯಾಗಲೆಂದ ಬಂದನು ಅಳಿಯನು ಮನೆಗೆ ಸ್ಮರಣೆಗೆ ಬರಲಿಲ್ಲ(ಸ್ವಾಮಿ) ಹೊರಟನು ವಣಿಜಕೆ ದೂರಕೆ(2) ನಿಂದೆಗೆ ಗುರಿಯಾದ                ...